17 ಸದಸ್ಯ ಬಲದ ಎಪಿಎಂಸಿಯಲ್ಲಿ ಮೊದಲ ಅವಧಿಯಲ್ಲಿ ಬಿಜೆಪಿಯ ಜ್ಯೋತಿ ಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಹಿಡಿದಿತ್ತು. ಎರಡನೇ ಅವಧಿಗೆ ದುಗ್ಗಪ್ಪ ಗೌಡ ಅಧ್ಯಕ್ಷರಾದರು. ಮೂರನೇ ಅವಧಿಯ ಚುನಾವಣೆ ಬುಧವಾರ ನಿಗದಿಯಾಗಿತ್ತು. ಎಪಿಎಂಸಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಗುಂಪಿನ 9 ಸದಸ್ಯರು, ಬಿಜೆಪಿ ಗುಂಪಿನ 8 ಸದಸ್ಯರು ಇದ್ದರು. ಈ ಮಧ್ಯೆ ತ್ಯಾಜವಳ್ಳಿಯ ಟಿ.ಬಿ.ಜಗದೀಶ್ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕಾರಣ ಬಿಜೆಪಿ ಗುಂಪಿನ ಬಲ ವೃದ್ಧಿಸಿತ್ತು. ಹಾಗಾಗಿ, ಸುಲಭವಾಗಿ ಬಿಜೆಪಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು.