<p><strong>ಶಿವಮೊಗ್ಗ: </strong>ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ನ ದುಗ್ಗಪ್ಪಗೌಡ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿಕುಂಸಿ ಬಾಬಣ್ಣ ಗೆಲುವು ಸಾಧಿಸಿದರು.</p>.<p>17 ಸದಸ್ಯ ಬಲದ ಎಪಿಎಂಸಿಯಲ್ಲಿ ಮೊದಲ ಅವಧಿಯಲ್ಲಿ ಬಿಜೆಪಿಯ ಜ್ಯೋತಿ ಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಹಿಡಿದಿತ್ತು. ಎರಡನೇ ಅವಧಿಗೆ ದುಗ್ಗಪ್ಪ ಗೌಡ ಅಧ್ಯಕ್ಷರಾದರು. ಮೂರನೇ ಅವಧಿಯ ಚುನಾವಣೆ ಬುಧವಾರ ನಿಗದಿಯಾಗಿತ್ತು. ಎಪಿಎಂಸಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಗುಂಪಿನ 9 ಸದಸ್ಯರು, ಬಿಜೆಪಿ ಗುಂಪಿನ 8 ಸದಸ್ಯರು ಇದ್ದರು. ಈ ಮಧ್ಯೆ ತ್ಯಾಜವಳ್ಳಿಯ ಟಿ.ಬಿ.ಜಗದೀಶ್ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕಾರಣ ಬಿಜೆಪಿ ಗುಂಪಿನ ಬಲ ವೃದ್ಧಿಸಿತ್ತು. ಹಾಗಾಗಿ, ಸುಲಭವಾಗಿ ಬಿಜೆಪಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು.</p>.<p><strong>ಉಲ್ಟಾ ಹೊಡೆದ ಒಂದು ಮತ:</strong></p>.<p>ಬಿಜೆಪಿ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಟಿ.ಬಿ.ಜಗದೀಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿತ್ತು. ವಿಜಯೋತ್ಸವಕ್ಕೆ ಪಕ್ಷದ ಕಾರ್ಯಕರ್ತರೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಬಿಜೆಪಿ ಗುಂಪಿನ ಒಬ್ಬರು ಸದಸ್ಯರು ವಿರೋಧಿ ಗುಂಪಿಗೆ ಮತ ಹಾಕಿರುವುದು ಬಹಿರಂಗವಾಯಿತು. 9 ಮತಗಳನ್ನು ಪಡೆದ ದುಗ್ಗಪ್ಪ ಗೌಡ, ಕುಂಸಿ ಬಾಬು ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು. ಬಿಜೆಪಿ ಮುಖಂಡರು ತೀವ್ರ ಮುಖಭಂಗ ಅನುಭವಿಸಿದರು.</p>.<p><strong>ಆಣೆ–ಪ್ರಮಾಣದ ಪ್ರಸಂಗ:</strong></p>.<p>ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸದಸ್ಯರಲ್ಲಿ ಕೈಕೊಟ್ಟವರ ಕುರಿತು ಶೋಧನಾ ಕಾರ್ಯ ನಡೆಯಿತು. ಗುಪ್ತ ಮತದಾನವಾದ ಕಾರಣ ಪತ್ತೆಕಾರ್ಯ ಕಷ್ಟವಾಯಿತು. ಕೊನೆಗೆ ದೇವರ ಸನ್ನಿದಾನಕ್ಕೆ ತೆರಳಿ 9 ಸದಸ್ಯರಿಂದಲೂ ಆಣೆ, ಪ್ರಮಾಣ ಮಾಡಿಸಲು ನಿರ್ಧರಿಸಿದರು. ಪಕ್ಷದ ಕಾರ್ಯಕರ್ತರಲ್ಲೂ ನಿರಾಸೆ ಕಂಡುಬಂತು.</p>.<p>ಜೆಡಿಎಸ್ ವಿಜಯೋತ್ಸವ: ದುಗ್ಗಪ್ಪ ಗೌಡ ಅವರು ಗೆಲುವು ಸಾಧಿಸುತ್ತಿದಂತೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂವಿನ ಹಾರ ಹಾಕಿ ಹೊತ್ತು ಕುಣಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ನ ದುಗ್ಗಪ್ಪಗೌಡ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿಕುಂಸಿ ಬಾಬಣ್ಣ ಗೆಲುವು ಸಾಧಿಸಿದರು.</p>.<p>17 ಸದಸ್ಯ ಬಲದ ಎಪಿಎಂಸಿಯಲ್ಲಿ ಮೊದಲ ಅವಧಿಯಲ್ಲಿ ಬಿಜೆಪಿಯ ಜ್ಯೋತಿ ಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಹಿಡಿದಿತ್ತು. ಎರಡನೇ ಅವಧಿಗೆ ದುಗ್ಗಪ್ಪ ಗೌಡ ಅಧ್ಯಕ್ಷರಾದರು. ಮೂರನೇ ಅವಧಿಯ ಚುನಾವಣೆ ಬುಧವಾರ ನಿಗದಿಯಾಗಿತ್ತು. ಎಪಿಎಂಸಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಗುಂಪಿನ 9 ಸದಸ್ಯರು, ಬಿಜೆಪಿ ಗುಂಪಿನ 8 ಸದಸ್ಯರು ಇದ್ದರು. ಈ ಮಧ್ಯೆ ತ್ಯಾಜವಳ್ಳಿಯ ಟಿ.ಬಿ.ಜಗದೀಶ್ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕಾರಣ ಬಿಜೆಪಿ ಗುಂಪಿನ ಬಲ ವೃದ್ಧಿಸಿತ್ತು. ಹಾಗಾಗಿ, ಸುಲಭವಾಗಿ ಬಿಜೆಪಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು.</p>.<p><strong>ಉಲ್ಟಾ ಹೊಡೆದ ಒಂದು ಮತ:</strong></p>.<p>ಬಿಜೆಪಿ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಟಿ.ಬಿ.ಜಗದೀಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿತ್ತು. ವಿಜಯೋತ್ಸವಕ್ಕೆ ಪಕ್ಷದ ಕಾರ್ಯಕರ್ತರೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಬಿಜೆಪಿ ಗುಂಪಿನ ಒಬ್ಬರು ಸದಸ್ಯರು ವಿರೋಧಿ ಗುಂಪಿಗೆ ಮತ ಹಾಕಿರುವುದು ಬಹಿರಂಗವಾಯಿತು. 9 ಮತಗಳನ್ನು ಪಡೆದ ದುಗ್ಗಪ್ಪ ಗೌಡ, ಕುಂಸಿ ಬಾಬು ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು. ಬಿಜೆಪಿ ಮುಖಂಡರು ತೀವ್ರ ಮುಖಭಂಗ ಅನುಭವಿಸಿದರು.</p>.<p><strong>ಆಣೆ–ಪ್ರಮಾಣದ ಪ್ರಸಂಗ:</strong></p>.<p>ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸದಸ್ಯರಲ್ಲಿ ಕೈಕೊಟ್ಟವರ ಕುರಿತು ಶೋಧನಾ ಕಾರ್ಯ ನಡೆಯಿತು. ಗುಪ್ತ ಮತದಾನವಾದ ಕಾರಣ ಪತ್ತೆಕಾರ್ಯ ಕಷ್ಟವಾಯಿತು. ಕೊನೆಗೆ ದೇವರ ಸನ್ನಿದಾನಕ್ಕೆ ತೆರಳಿ 9 ಸದಸ್ಯರಿಂದಲೂ ಆಣೆ, ಪ್ರಮಾಣ ಮಾಡಿಸಲು ನಿರ್ಧರಿಸಿದರು. ಪಕ್ಷದ ಕಾರ್ಯಕರ್ತರಲ್ಲೂ ನಿರಾಸೆ ಕಂಡುಬಂತು.</p>.<p>ಜೆಡಿಎಸ್ ವಿಜಯೋತ್ಸವ: ದುಗ್ಗಪ್ಪ ಗೌಡ ಅವರು ಗೆಲುವು ಸಾಧಿಸುತ್ತಿದಂತೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂವಿನ ಹಾರ ಹಾಕಿ ಹೊತ್ತು ಕುಣಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>