ನಮ್ಮ ವಿರೋಧದ ನಡುವೆಯೂ ವಸತಿ ಯೋಜನೆಗೆ 100 ಎಕರೆ ಭೂಮಿ ವಶಪಡಿಸಿಕೊಂಡಾಗ ಬಂಗಾರಪ್ಪ ಅವರು ನಮ್ಮ ಊರಿಗೆ ಬಂದು ಅಳಲು ಆಲಿಸಿ ನಮ್ಮೊಂದಿಗೆ ರಾಗಿ ರೊಟ್ಟಿ ತಿಂದು ಸರ್ಕಾರದೊಂದಿಗೆ ಮಾತಾಡಿ ನಮ್ಮ ಜಮೀನು ಉಳಿಸಿದ್ದರು.
ನಾರಾಯಣಪ್ಪ ಕುಗ್ವೆ
ನನಗೆ ಬಂಗಾರಪ್ಪ ಅವರೇ ಪಕ್ಷ. ಅವರು ಎಲ್ಲಿಗೆ ಹೋಗುತ್ತಿದ್ದರೋ ಅಲ್ಲಿಗೆ ನಾನೂ ಹೋಗುತ್ತಿದ್ದೆ. ಕಷ್ಟ–ಸುಖ ಆಲಿಸಿ ನಮ್ಮನ್ನು ಬೆಳೆಸಿದ್ದಾರೆ. ತಾಳಗುಪ್ಪಕ್ಕೆ ಬಂದಾಗ ನಮ್ಮ ಮನೆಗೆ ಬಂದು ಏಡಿ ಮೀನಿನ ಊಟ ಮಾಡಿದ್ದರು ಅದು ಸ್ಮರಣೀಯ.
ಲೋಕೇಶ್ ಗಾಳಿಪುರ
ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಬಂಗಾರಪ್ಪ ಅವರ 14ನೇ ವರ್ಷದ ಪುಣ್ಯತಿಥಿಯ ಪೂಜಾ ಕಾರ್ಯದಲ್ಲಿ ಸಚಿವ ಮಧು ಬಂಗಾರಪ್ಪ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು