ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಜಲಾಶಯ: ಸೋರಿಕೆ ತಡೆಗೆ ನೀರಿನಡಿ ಕಾರ್ಯಾಚರಣೆ

ಕೆಎನ್‌ಎನ್‌ಗೆ ಕೇಂದ್ರದ ತಜ್ಞರಿಂದಲೂ ತಾಂತ್ರಿಕ ನೆರವು
Published : 6 ಜುಲೈ 2024, 21:30 IST
Last Updated : 6 ಜುಲೈ 2024, 21:30 IST
ಫಾಲೋ ಮಾಡಿ
Comments
ಕೆಎನ್‌ಎನ್‌ ತಕ್ಷಣ ಕಾರ್ಯಪ್ರವೃತ್ತವಾದ ಕಾರಣ ಜಲಾಶಯ ಅಪಾಯದಿಂದ ಪಾರಾಗಿದೆ. ಗೇಟ್‌ನ ಶಾಶ್ವತ ದುರಸ್ತಿ ಕಾರ್ಯ ಆಗುತ್ತಿದೆ. ಅಪಪ್ರಚಾರ ಊಹಾಪೋಹಗಳಿಗೆ ಕಿವಿಗೊಡಬೇಡಿ.
–ಎನ್‌.ರವಿಕುಮಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಭದ್ರಾ ಜಲಾಶಯ ವಿಭಾಗ ಲಕ್ಕವಳ್ಳಿ
ಆಕ್ಸಿಜನ್ ಮಾಸ್ಕ್ ಧರಿಸಿ ದುರಸ್ತಿ ಕಾರ್ಯ
ಜಲಾಶಯದಲ್ಲಿ ಸದ್ಯ 130 ಅಡಿ ನೀರಿನ ಸಂಗ್ರಹ ಇದೆ. ಗೇಟ್‌ 45 ಅಡಿ ಎತ್ತರದಲ್ಲಿದೆ. ಹೀಗಾಗಿ 85 ಅಡಿ ಆಳದ ನೀರಿನಲ್ಲಿ ಆಕ್ಸಿಜನ್ ಮಾಸ್ಕ್‌ ಧರಿಸಿ ತಜ್ಞರು ಗೇಟ್‌ನ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆರು ಮಂದಿ ಮುಳುಗು ತಜ್ಞರು ಸೇರಿದಂತೆ ಕೊಡಗಿನಿಂದ ಬಂದಿರುವ 20 ಮಂದಿ ತಂತ್ರಜ್ಞರು ಈ ಕಾರ್ಯದಲ್ಲಿ ತೊಡಗಿದ್ದಾರೆ. ‘ಹೈದರಾಬಾದ್‌ನಲ್ಲಿರುವ ಡಿಎಸ್‌ಆರ್‌ಪಿಯ ಗೇಟ್‌ ತಂತ್ರಜ್ಞರೊಬ್ಬರು ಆನ್‌ಲೈನ್‌ ಮೂಲಕವೇ ದುರಸ್ತಿ ಕಾರ್ಯಕ್ಕೆ ಕೆಎನ್‌ಎನ್‌ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಡಿಎಸ್‌ಒ ಅಧಿಕಾರಿಗಳು ಬೆಂಗಳೂರಿನಿಂದ ಸಲಹೆ ಸೂಚನೆ ನೀಡುತ್ತಿದ್ದಾರೆ. ಕೆಎನ್‌ಎನ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಕಾರ್ಯಾಚರಣೆಯ ಸಮನ್ವಯ ನಡೆಸುತ್ತಿದ್ದಾರೆ’ ಎಂದು ಎನ್.ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT