<p><strong>ಭದ್ರಾವತಿ: </strong>ಭದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣ ಭದ್ರಾನದಿ ತುಂಬಿ ಹರಿಯತ್ತಿದ್ದು, ಸುಗಮ ಸಂಚಾರ ವ್ಯವಸ್ಥೆಗೆ ನಗರಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮಗಳನ್ನು ಜರುಗಿಸಿದೆ.</p>.<p>ನದಿ ಪಾತ್ರದ ನಗರ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿನ ನಿವಾಸಿಗಳಿಗೆ ಆತಂಕ ಎದುರಾಗಿದ್ದು ಅವರ ರಕ್ಷಣೆಗಾಗಿ ಹಲವು ಮುಂಜಾಗ್ರತೆ ಕ್ರಮವನ್ನು ತಾಲ್ಲೂಕು ಹಾಗೂ ನಗರಾಡಳಿತ ಈಗಾಗಲೇ ಕೈಗೊಂಡಿದೆ.</p>.<p>ಬುಧವಾರ ರಾತ್ರಿ ವೇಳೆಗೆ ನದಿ ನೀರು ಹೊಸ ಸೇತುವೆ ರಸ್ತೆಯ ಮೇಲೆ ಹರಿಯುವ ಸಾಧ್ಯತೆ ಇರುವ ಕಾರಣ ಅಲ್ಲಿನ ಸಂಚಾರ ವ್ಯವಸ್ಥೆ ಸ್ಥಗಿತ ಮಾಡುವ ನಿಟ್ಟಿನಲ್ಲಿ ಪೊಲಿಸ್ ಇಲಾಖೆ ಕ್ರಮ ತೆಗೆದುಕೊಂಡಿದೆ.</p>.<p>ನದಿಯಲ್ಲಿನ ಸಂಗಮೇಶ್ವರ ದೇವಾಲಯದ ಗೋಪುರ ಮುಳುಗಿದ್ದು, ನದಿಪಾತ್ರದ ಏಕೀನ್ ಷಾ ಕಾಲೊನಿ, ಗೌಳಿಗರಬೀದಿ, ಗುಂಡೂರಾವ್ ಷೆಡ್, ಕವಲಗುಂದಿ ಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸಕ್ಕೂ ತಾಲ್ಲೂಕು ಆಡಳಿತ ಮುಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ಭದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣ ಭದ್ರಾನದಿ ತುಂಬಿ ಹರಿಯತ್ತಿದ್ದು, ಸುಗಮ ಸಂಚಾರ ವ್ಯವಸ್ಥೆಗೆ ನಗರಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮಗಳನ್ನು ಜರುಗಿಸಿದೆ.</p>.<p>ನದಿ ಪಾತ್ರದ ನಗರ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿನ ನಿವಾಸಿಗಳಿಗೆ ಆತಂಕ ಎದುರಾಗಿದ್ದು ಅವರ ರಕ್ಷಣೆಗಾಗಿ ಹಲವು ಮುಂಜಾಗ್ರತೆ ಕ್ರಮವನ್ನು ತಾಲ್ಲೂಕು ಹಾಗೂ ನಗರಾಡಳಿತ ಈಗಾಗಲೇ ಕೈಗೊಂಡಿದೆ.</p>.<p>ಬುಧವಾರ ರಾತ್ರಿ ವೇಳೆಗೆ ನದಿ ನೀರು ಹೊಸ ಸೇತುವೆ ರಸ್ತೆಯ ಮೇಲೆ ಹರಿಯುವ ಸಾಧ್ಯತೆ ಇರುವ ಕಾರಣ ಅಲ್ಲಿನ ಸಂಚಾರ ವ್ಯವಸ್ಥೆ ಸ್ಥಗಿತ ಮಾಡುವ ನಿಟ್ಟಿನಲ್ಲಿ ಪೊಲಿಸ್ ಇಲಾಖೆ ಕ್ರಮ ತೆಗೆದುಕೊಂಡಿದೆ.</p>.<p>ನದಿಯಲ್ಲಿನ ಸಂಗಮೇಶ್ವರ ದೇವಾಲಯದ ಗೋಪುರ ಮುಳುಗಿದ್ದು, ನದಿಪಾತ್ರದ ಏಕೀನ್ ಷಾ ಕಾಲೊನಿ, ಗೌಳಿಗರಬೀದಿ, ಗುಂಡೂರಾವ್ ಷೆಡ್, ಕವಲಗುಂದಿ ಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸಕ್ಕೂ ತಾಲ್ಲೂಕು ಆಡಳಿತ ಮುಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>