<p><strong>ಶಿಕಾರಿಪುರ:</strong> ಪಟ್ಟಣದಲ್ಲಿ ನಡೆದ ಬೈಕ್ ಕಳವು ಪ್ರಕರಣ ಬೇಧಿಸಲು ಹೊರಟ ಪೊಲೀಸರಿಗೆ 16 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ₹20.5 ಲಕ್ಷ ಮೌಲ್ಯದ 16 ಬೈಕ್ಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.</p>.<p>ತರೀಕೆರೆ ತಾಲ್ಲೂಕು ದೊಡ್ಡಲಿಂಗೇನಹಳ್ಳಿಯ ಪ್ರತಾಪ್ (33), ಜಗಳೂರು ತಾಲ್ಲೂಕು ಬಿಳಚೋಡು ಗ್ರಾಮದ ಭೋಜರಾಜ (32) ಬಂಧಿತರು.</p>.<p>ಪಟ್ಟಣದ ಸುಬೇದಾರ್ ಕೇರಿ ನಿವಾಸಿ ಫೈಜಾನ್ಬಾಷಾ ಅವರ ಪಲ್ಸರ್ ಬೈಕ್ ಈಚೆಗೆ ಕಳವಾಗಿತ್ತು. ಆರೋಪಿಗಳು ಅದನ್ನು ಕದ್ದೊಯ್ಯುವಾಗ ರಾತ್ರಿ ಬೀಟ್ನಲ್ಲಿದ್ದ ಪಟ್ಟಣ ಠಾಣೆ ಪಿಎಸ್ಐ ಶರತ್ ಹಾಗೂ ಸಿಬ್ಬಂದಿ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ, ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.</p>.<p>ಆರೋಪಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ, ಆರೋಪಿಗಳಿಬ್ಬರು 16 ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಎಲ್ಲ ಪ್ರಕರಣಗಳ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದಲ್ಲಿ ಕಳ್ಳತನವಾದ ಬೈಕ್ ಪಲ್ಸರ್ ಆಗಿದ್ದರೆ, ಇನ್ನುಳಿದವು ಬುಲೆಟ್ ಬೈಕ್ಗಳಾಗಿರುವುದು ವಿಶೇಷ.</p>.<p>ಅರಸೀಕರೆ, ತರೀಕೆರೆ, ಚನ್ನರಾಯಪಟ್ಟಣ, ಶಿರಾ, ಚಿತ್ರದುರ್ಗ, ಜಗಳೂರು, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಬೆಂಡೆಗೆರೆ, ಮುನಿರಾಬಾದ್, ಮುಂಡರಗಿ, ಹೂವಿನಹಡಗಲಿ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾಗಿವೆ. ಡಿವೈಎಸ್ಪಿ ಕೇಶವ್, ವೃತ್ತ ನಿರೀಕ್ಷ ರುದ್ರೇಶ್ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ಕೈಗೊಳ್ಳಲಾಗಿತ್ತು, ತನಿಖಾ ತಂಡದ ಕಾರ್ಯಕ್ಕೆ ಶಿವಮೊಗ್ಗ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ:</strong> ಪಟ್ಟಣದಲ್ಲಿ ನಡೆದ ಬೈಕ್ ಕಳವು ಪ್ರಕರಣ ಬೇಧಿಸಲು ಹೊರಟ ಪೊಲೀಸರಿಗೆ 16 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ₹20.5 ಲಕ್ಷ ಮೌಲ್ಯದ 16 ಬೈಕ್ಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.</p>.<p>ತರೀಕೆರೆ ತಾಲ್ಲೂಕು ದೊಡ್ಡಲಿಂಗೇನಹಳ್ಳಿಯ ಪ್ರತಾಪ್ (33), ಜಗಳೂರು ತಾಲ್ಲೂಕು ಬಿಳಚೋಡು ಗ್ರಾಮದ ಭೋಜರಾಜ (32) ಬಂಧಿತರು.</p>.<p>ಪಟ್ಟಣದ ಸುಬೇದಾರ್ ಕೇರಿ ನಿವಾಸಿ ಫೈಜಾನ್ಬಾಷಾ ಅವರ ಪಲ್ಸರ್ ಬೈಕ್ ಈಚೆಗೆ ಕಳವಾಗಿತ್ತು. ಆರೋಪಿಗಳು ಅದನ್ನು ಕದ್ದೊಯ್ಯುವಾಗ ರಾತ್ರಿ ಬೀಟ್ನಲ್ಲಿದ್ದ ಪಟ್ಟಣ ಠಾಣೆ ಪಿಎಸ್ಐ ಶರತ್ ಹಾಗೂ ಸಿಬ್ಬಂದಿ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ, ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.</p>.<p>ಆರೋಪಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ, ಆರೋಪಿಗಳಿಬ್ಬರು 16 ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಎಲ್ಲ ಪ್ರಕರಣಗಳ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದಲ್ಲಿ ಕಳ್ಳತನವಾದ ಬೈಕ್ ಪಲ್ಸರ್ ಆಗಿದ್ದರೆ, ಇನ್ನುಳಿದವು ಬುಲೆಟ್ ಬೈಕ್ಗಳಾಗಿರುವುದು ವಿಶೇಷ.</p>.<p>ಅರಸೀಕರೆ, ತರೀಕೆರೆ, ಚನ್ನರಾಯಪಟ್ಟಣ, ಶಿರಾ, ಚಿತ್ರದುರ್ಗ, ಜಗಳೂರು, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಬೆಂಡೆಗೆರೆ, ಮುನಿರಾಬಾದ್, ಮುಂಡರಗಿ, ಹೂವಿನಹಡಗಲಿ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾಗಿವೆ. ಡಿವೈಎಸ್ಪಿ ಕೇಶವ್, ವೃತ್ತ ನಿರೀಕ್ಷ ರುದ್ರೇಶ್ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ಕೈಗೊಳ್ಳಲಾಗಿತ್ತು, ತನಿಖಾ ತಂಡದ ಕಾರ್ಯಕ್ಕೆ ಶಿವಮೊಗ್ಗ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>