ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ತಾಲ್ಲೂಕುಗಳಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇರುವ ಜೀವವೈವಿಧ್ಯ ಸಮಿತಿಗಳಿಗೆ ಪುನಶ್ಚೇತನ ನೀಡಲು ತೀರ್ಮಾನಿಸಲಾಗಿದೆ. ಸ್ಥಳೀಯ ಗ್ರಾಮ ಅರಣ್ಯ ಸಮಿತಿಗಳ ನೆರವು ಪಡೆದು ಆಯಾ ಗ್ರಾಮಗಳ ಕೆರೆಕಟ್ಟೆ, ಕಾನು, ಅರಣ್ಯ, ಗೋಮಾಳ ಸಂರಕ್ಷಣೆಯತ್ತ ಗಮನ ನೀಡಲಾಗುತ್ತದೆ ಎಂದು ಅವರು
ತಿಳಿಸಿದರು.