‘ಬಿಜೆಪಿಯಲ್ಲಿ ಸಿಎಂ ಸೀಟಿಗೆ ₹ 2500 ಸಾವಿರ ಕೋಟಿ ಇಡಬೇಕು ಎಂದು ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಆದರೂ ಅವರ ವಿರುದ್ಧ ಬಿಜೆಪಿ ಕ್ರಮ ಕೊಂಡಿಲ್ಲ. ಏಕೆಂದರೆ, ಯತ್ನಾಳ್ಗೆ ಬಿಜೆಪಿ ನಾಯಕರ ಬಂಡವಾಳ ಗೊತ್ತಿದೆ. ಅದಕ್ಕಾಗಿ ಅವರು ಏನು ಹೇಳಿದರೂ ಯಾರೂ ಅವರ ವಿರುದ್ಧ ಕ್ರಮ ಕೈಗೊಳ್ಳಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ನಾನು ಇದ್ದು, ನಮ್ಮ ಪಕ್ಷದವರು ಯಾರಾದರೂ ಈ ರೀತಿ ಹೇಳಿಕೆ ಕೊಟ್ಟಿದ್ದಿದ್ದರೆ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುತ್ತಿದ್ದೆ’ ಎಂದು ಕುಟುಕಿದರು.