ಶಿವಮೊಗ್ಗ: ದಕ್ಷಿಣ ಭಾರತದ ಮೊದಲ ಜೈವಿಕ ಸುರಕ್ಷಾ ಪ್ರಯೋಗಾಲಯವನ್ನು (ಬಿಎಸ್ಎಲ್–3) ಶಿವಮೊಗ್ಗದಲ್ಲಿಸ್ಥಾಪಿಸಲು ರಾಜ್ಯಮಟ್ಟದ ತಾಂತ್ರಿಕ ಸಮಿತಿ ಪರಿಶೀಲಿಸುತ್ತಿದ್ದು, ಈ ಕೇಂದ್ರ ಆರಂಭವಾದರೆ ಮಂಗನಕಾಯಿಲೆ, ‘ಕೋವಿದ್–19’ ಸೇರಿ ಮಾರಣಾಂತಿಕ ವೈರಸ್ಗಳ ತ್ವರಿತ ಪತ್ತೆಗೆ ಸಹಕಾರಿಯಾಗಲಿದೆ.
ಸಿಎಂ ಯಡಿಯೂರಪ್ಪ ಈಗಾಗಲೇ ಪ್ರಯೋಗಾಲಯ ಸ್ಥಾಪನೆಗೆ ₹ 15 ಕೋಟಿ ಘೋಷಿಸಿದ್ದಾರೆ. ಪ್ರಯೋಗಾಲಯದ ಮಾದರಿ ಕುರಿತು ವಿಜ್ಞಾನಿಗಳು, ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿ ಒಪ್ಪಿಗೆ ದೊರೆತ ತಕ್ಷಣ ಪ್ರಯೋಗಾಲಯ ಸ್ಥಾಪನೆ ಕಾರ್ಯ ಆರಂಭವಾಗಲಿವೆ.
ಪ್ರಸ್ತುತ ಶಿವಮೊಗ್ಗದಲ್ಲಿರುವಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರದಲ್ಲಿ ಮಂಗನ ಕಾಯಿಲೆ ರೋಗ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತದ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಜೈವಿಕ ಸುರಕ್ಷಾ ಪ್ರಯೋಗಾಲಯ ಆರಂಭವಾದರೆ ಮಂಗನ ಕಾಯಿಲೆ ಸೇರಿದಂತೆ ಎಲ್ಲ ರೋಗಗಳ ಪರೀಕ್ಷೆಗಳೂ ಇಲ್ಲೇ ನಡೆಯಲಿವೆ.