ಬಸ್ಸು ಆನವೇರಿಯಿಂದ ಕನಸಿನಕಟ್ಟೆ ಮಾರ್ಗವಾಗಿ ಶಿವಮೊಗ್ಗ ತಲುಪಲಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣ ಸೌಲಭ್ಯವಿರುವುದರಿಂದ ಸರ್ಕಾರಿ ಬಸ್ ಕಲ್ಪಿಸಿರುವುದು ಅನುಕೂಲವಾಗಿದೆ ಎಂದು ಗ್ರಾಮದ ಯುವಕ ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಸಿ.ವೈ. ರಾಜು, ಗ್ರಾಮದ ಮುಖಂಡರಾದ ಸೀತಾರಾಂ, ವೀರಭದ್ರ, ಮಂಜುನಾಥ, ನಾಗರಾಜ್, ಹಾಲೇಶ್, ಕರಿಬಸವಯ್ಯ ಇನ್ನಿತರರು ಸಂತಸ ವ್ಯಕ್ತಪಡಿಸಿದ್ದಾರೆ.