ಭದ್ರಾವತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳವಾರ ಸಿಬಿಐ ಅಧಿಕಾರಿಗಳು ನನ್ನ ಪುತ್ರಿಗೆ ನೋಟಿಸ್ ನೀಡಿದ್ದಾರೆ’ ಎಂದು ಹೇಳಿದರು. ‘ಆಕೆ ಓದುತ್ತಿದ್ದಾಗ ಕಾಲೇಜಿಗೆ ಎಷ್ಟು ಫೀಸ್ ಕಟ್ಟಲಾಗಿತ್ತು, ಎಷ್ಟು ವಿಷಯಗಳಲ್ಲಿ ಪಾಸ್ ಮಾಡಿದ್ದಾರೆ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಎಷ್ಟು ಕೀಳುಮಟ್ಟದಲ್ಲಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ನೀವೇ (ಮಾಧ್ಯಮ) ಊಹಿಸಿ’ ಎಂದು ತಿಳಿಸಿದರು.