ಜಿಲ್ಲೆಯ 7 ತಾಲ್ಲೂಕುಗಳಲ್ಲಿ 19,597 ಸ್ವ-ಸಹಾಯ ಸಂಘಗಳು ಕೆಲಸ ಮಾಡುತ್ತಿವೆ. 1,70,057 ಕುಟುಂಬಗಳಿಗೆ ಯೋಜನೆಯ ನೆರವು ದೊರೆಯುತ್ತಿದೆ. ಮಾನವ ಸಂಪನ್ಮೂಲ ಆಧಾರಿತ ಈ ಕಾರ್ಯಕ್ರಮಗಳಿಗೆ ‘ಚೈತನ್ಯ ಸೌಧ’ಬಳಕೆ ಮಾಡಲಾಗುವುದು.ಕಡಿಮೆ ನೀರು ಉಪಯೋಗಿಸಿ, ಶ್ರೀಪದ್ಧತಿ ಬೇಸಾಯ ಮಾಡಿದರೆ ಉತ್ಪಾದನಾ ವೆಚ್ಚ ತಗ್ಗಿಸಬಹುದು. ಭತ್ತ ಬೇಸಾಯ ಲಾಭದಾಯಕವಾಗಿಸಲು ಯಂತ್ರಶ್ರೀ ಕಾರ್ಯಕ್ರಮ ಜಾರಿಗೆತರಲಾಗುತ್ತಿದೆ. ಜಿಲ್ಲೆಯಲ್ಲಿ 5ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ. ಭತ್ತ ಬೆಳೆಯುವ ರಾಜ್ಯದ 14 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದುದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.