ಮಹಿಳೆ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿಯೇ ಪತೊಯ ಜತೆ ವಾಸಿಸುತ್ತಿದ್ದರು. ಅವರ ತಾಯಿ ಇಲ್ಲಿನ ಬೊಮ್ಮನಕಟ್ಟೆ ವಾಸಿ. ಅವರೂ ಮಾರ್ಚ್ನಲ್ಲಿಲಾಕ್ಡೌನ್ಗೂ ಮೊದಲು ದೆಹಲಿಗೆ ತೆರಳಿದ್ದರು. ಮೇ 22ರಂದು ದೆಹಲಿಯಿಂದ ಮಹಿಳೆ ಜತೆಗೆ ತಾಯಿ, ಗಂಡ ಹಾಗೂ ಸಂಬಂಧಿಯ ಹುಡುಗ ಭದ್ರಾವತಿಗೆ ಬಂದಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿ, ಖಾಸಗಿ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಿದ್ದರು.ನಂತರ ಬೊಮ್ಮನಕಟ್ಟೆಯ ಅವರ ಮನೆಗೆ ಕಳುಹಿಸಿದ್ದರು.
ಇದ್ದದ್ದು ಒಂದೇ ಗಂಟೆ: ವಸತಿಗೃಹದ ಕ್ವಾರಂಟೈನ್ ಮುಗಿಸಿ, ಮನೆಗೆ ತೆರಳಿದ್ದ ಒಂದೇ ಗಂಟೆಯಲ್ಲಿ ಪುನಃ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಬೊಮ್ಮನಕಟ್ಟೆಸುತ್ತಲಿನ ನಾಗರಿಕರಲ್ಲಿ ಆತಂಕ ಹೆಚ್ಚು ಮಾಡಿದೆ. ವಸತಿ ಗೃಹದ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ವಸತಿ ಗೃಹ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.