ಶಿವಮೊಗ್ಗ: ಹಣ ನೀಡದಿದ್ದರೆಏಕಾಂತದಲ್ಲಿರುವವೀಡಿಯೊ ಬಹಿರಂಗಪಡಿಸುವುದಾಗಿಕಿಡಿಗೇಡಿಗಳುಬೆದರಿಸಿದ ಪರಿಣಾಮ ಆಯನೂರುಸಮೀಪದ ಮಂಡಘಟ್ಟ ಹೊಲದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿದ್ದಾರೆ.
ಯುವಕ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಯುವತಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಮಂಡಘಟ್ಟ ಗ್ರಾಮದ ನಿವಾಸಿ ಸಂಜಯ್ (21)ಮೃತ ಯುವಕ.ಸಂಜಯ್ ಕೂಲಿ ಕೆಲಸ ಮಾಡುತ್ತಿದ್ದರು.ರಾಗಿಹೊಸಳ್ಳಿ ಗ್ರಾಮದಯುವತಿಮತ್ತು ಸಂಜಯ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇಬ್ಬರು ಒಟ್ಟಿಗೆ ಇದ್ದ ಚಿತ್ರಗಳನ್ನು ಕದ್ದುಮುಚ್ಚಿ ಚಿತ್ರೀಕರಿಸಿದ್ದ ಕೆಲವು ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು.ಹಣ ನೀಡದಿದ್ದರೆಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಬೆದರಿಕೆ ಹಾಕಿದ್ದರು. ಈ ಸಂಭಾಷಣೆಬಹಿರಂಗವಾಗಿದೆ.ಬೆದರಿಕೆ ಹಾಕಿದಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.