<p><strong>ಸೊರಬ</strong>: 12ನೇ ಶತಮಾನದಲ್ಲಿ ಪಂಡಿತರಿಗಷ್ಟೇ ಸೀಮಿತವಾಗಿದ್ದ ಧಾರ್ಮಿಕ ಭಾವನೆಯನ್ನು ಮನುಷ್ಯನ ದೇಹದಲ್ಲಿ ದೈವತ್ವದ ಕಲ್ಪನೆ ಮೂಡಿಸಿ ಪ್ರತಿಯೊಬ್ಬರಲ್ಲೂ ದೇವರಿದ್ದಾನೆ ಎಂದು ಪ್ರತಿಪಾದಿಸಿದ ಶರಣರ ನಾಡಿನಲ್ಲಿ ಮತ್ತೆ ಜಾತಿಯ ಹೆಸರಿನಲ್ಲಿ ಆಂದೋಲನ ನಡೆಯುತ್ತಿರುವುದು ದುರಂತ ಎಂದು ವೈದ್ಯ ಡಾ.ಜ್ಞಾನೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪಟ್ಟಣದ ಮುರುಘಾ ಮಠದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ, ಮಂಥನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ದೇವರನ್ನು ಗುಡಿಯೊಳಗೆ ನೋಡುವ ಸನಾತನ ಸಂಸ್ಕೃತಿಗೆ ದೇವರನ್ನು ಹೊರಗೆ ಕಾಯುವ ಪಾಮರರ ಭಾವೈಕ್ಯ ಅರ್ಥವಾಗದಿದ್ದಾಗ ಶರಣರು ಧಾರ್ಮಿಕ ಕ್ರಾಂತಿ ನಡೆಸಿದರು. ದೇಹವನ್ನು ದೇಗುಲ ಮಾಡಿ ಆತ್ಮದಲ್ಲಿ ದೇವರ ದರ್ಶನ ಮಾಡಿದ ವಚನಕಾರರ ತತ್ವ, ಸಿದ್ಧಾಂತ ಇಂದು ಎಲ್ಲ ಸಮುದಾಯಕ್ಕೂ ಪ್ರಸ್ತುತವಾಗಬೇಕಿದೆ ಎಂದರು.</p>.<p>ಆಧುನಿಕ ಯುಗದಲ್ಲಿ ಜಾತಿಯ ಭಾವನೆಗೆ ಹೆಚ್ಚು ನೀರೆರೆದು ಪೋಷಿಸುತ್ತಿರುವರಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಠಗಳು ತಮ್ಮ ತಮ್ಮ ಸಮುದಾಯದ ಪರವಾಗಿ ಚಳವಳಿಗೆ ಇಳಿದಿರುವುದು ಪ್ರಜಾಪ್ರಭುತ್ವದ ಅಧಃಪತನ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ವಚನ ಸಾಹಿತ್ಯ ಮತ್ತು ಯುವ ಜಾಗೃತಿ’ ವಿಷಯ ಕುರಿತು ಭರತ್ ಕಾರೇಕೊಪ್ಪ ಮಾತನಾಡಿದರು. ಇಂದಿರಾ ಗಾಂಧಿ ಮಹಿಳಾ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಪವಿತ್ರಾ ‘ಶರಣರ ಕಾಲದಲ್ಲಿ ಸಾಮಾಜಿಕ ಕ್ರಾಂತಿ’ ವಿಷಯದ ಬಗ್ಗೆ ಮಾತನಾಡಿದರು.</p>.<p>ಶಿಕ್ಷಕ ದೀಪಕ್ ಆಶಯ ನುಡಿಗಳನ್ನಾಡಿದರು. ಮಹಾಂತೇಶ್ ಕಳ್ಳಿಕೊನೆ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿ– 2ರಲ್ಲಿ ವಚನ ಗಾಯನ ವಿಶ್ಲೇಷಣೆ ಭಾವಾಭಿನಯ ನಡೆಯಿತು.</p>.<p>ಲಕ್ಷ್ಮೀಮುರುಳೀಧರ್ ವಚನಗಾಯನ ಮಾಡಿದರು. ಆನವಟ್ಟಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಈ. ಶಿವಕುಮಾರ್, ಕುಮಾರ್, ಸತೀಶ್, ಚಂದ್ರಪ್ಪ ಅತ್ತಿಕಟ್ಟೆ ಪ್ರತಿಕ್ರಿಯಿಸಿದರು. ಸ್ಫೂರ್ತಿ ಭಾವಾನಭಿಯ ಮಾಡಿದರು. ಸರ್ವಾಧ್ಯಕ್ಷೆ ರೇಣುಕಮ್ಮಗೌಳಿ, ಉಪನ್ಯಾಸಕ ಎಸ್.ಎಂ. ನೀಲೇಶ್, ಪವಿತ್ರಾ, ಭರತ್, ಕೃಷ್ಣಾನಂದ್, ಹಾಲೇಶ್ ನವುಲೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ</strong>: 12ನೇ ಶತಮಾನದಲ್ಲಿ ಪಂಡಿತರಿಗಷ್ಟೇ ಸೀಮಿತವಾಗಿದ್ದ ಧಾರ್ಮಿಕ ಭಾವನೆಯನ್ನು ಮನುಷ್ಯನ ದೇಹದಲ್ಲಿ ದೈವತ್ವದ ಕಲ್ಪನೆ ಮೂಡಿಸಿ ಪ್ರತಿಯೊಬ್ಬರಲ್ಲೂ ದೇವರಿದ್ದಾನೆ ಎಂದು ಪ್ರತಿಪಾದಿಸಿದ ಶರಣರ ನಾಡಿನಲ್ಲಿ ಮತ್ತೆ ಜಾತಿಯ ಹೆಸರಿನಲ್ಲಿ ಆಂದೋಲನ ನಡೆಯುತ್ತಿರುವುದು ದುರಂತ ಎಂದು ವೈದ್ಯ ಡಾ.ಜ್ಞಾನೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪಟ್ಟಣದ ಮುರುಘಾ ಮಠದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ, ಮಂಥನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ದೇವರನ್ನು ಗುಡಿಯೊಳಗೆ ನೋಡುವ ಸನಾತನ ಸಂಸ್ಕೃತಿಗೆ ದೇವರನ್ನು ಹೊರಗೆ ಕಾಯುವ ಪಾಮರರ ಭಾವೈಕ್ಯ ಅರ್ಥವಾಗದಿದ್ದಾಗ ಶರಣರು ಧಾರ್ಮಿಕ ಕ್ರಾಂತಿ ನಡೆಸಿದರು. ದೇಹವನ್ನು ದೇಗುಲ ಮಾಡಿ ಆತ್ಮದಲ್ಲಿ ದೇವರ ದರ್ಶನ ಮಾಡಿದ ವಚನಕಾರರ ತತ್ವ, ಸಿದ್ಧಾಂತ ಇಂದು ಎಲ್ಲ ಸಮುದಾಯಕ್ಕೂ ಪ್ರಸ್ತುತವಾಗಬೇಕಿದೆ ಎಂದರು.</p>.<p>ಆಧುನಿಕ ಯುಗದಲ್ಲಿ ಜಾತಿಯ ಭಾವನೆಗೆ ಹೆಚ್ಚು ನೀರೆರೆದು ಪೋಷಿಸುತ್ತಿರುವರಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಠಗಳು ತಮ್ಮ ತಮ್ಮ ಸಮುದಾಯದ ಪರವಾಗಿ ಚಳವಳಿಗೆ ಇಳಿದಿರುವುದು ಪ್ರಜಾಪ್ರಭುತ್ವದ ಅಧಃಪತನ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ವಚನ ಸಾಹಿತ್ಯ ಮತ್ತು ಯುವ ಜಾಗೃತಿ’ ವಿಷಯ ಕುರಿತು ಭರತ್ ಕಾರೇಕೊಪ್ಪ ಮಾತನಾಡಿದರು. ಇಂದಿರಾ ಗಾಂಧಿ ಮಹಿಳಾ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಪವಿತ್ರಾ ‘ಶರಣರ ಕಾಲದಲ್ಲಿ ಸಾಮಾಜಿಕ ಕ್ರಾಂತಿ’ ವಿಷಯದ ಬಗ್ಗೆ ಮಾತನಾಡಿದರು.</p>.<p>ಶಿಕ್ಷಕ ದೀಪಕ್ ಆಶಯ ನುಡಿಗಳನ್ನಾಡಿದರು. ಮಹಾಂತೇಶ್ ಕಳ್ಳಿಕೊನೆ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿ– 2ರಲ್ಲಿ ವಚನ ಗಾಯನ ವಿಶ್ಲೇಷಣೆ ಭಾವಾಭಿನಯ ನಡೆಯಿತು.</p>.<p>ಲಕ್ಷ್ಮೀಮುರುಳೀಧರ್ ವಚನಗಾಯನ ಮಾಡಿದರು. ಆನವಟ್ಟಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಈ. ಶಿವಕುಮಾರ್, ಕುಮಾರ್, ಸತೀಶ್, ಚಂದ್ರಪ್ಪ ಅತ್ತಿಕಟ್ಟೆ ಪ್ರತಿಕ್ರಿಯಿಸಿದರು. ಸ್ಫೂರ್ತಿ ಭಾವಾನಭಿಯ ಮಾಡಿದರು. ಸರ್ವಾಧ್ಯಕ್ಷೆ ರೇಣುಕಮ್ಮಗೌಳಿ, ಉಪನ್ಯಾಸಕ ಎಸ್.ಎಂ. ನೀಲೇಶ್, ಪವಿತ್ರಾ, ಭರತ್, ಕೃಷ್ಣಾನಂದ್, ಹಾಲೇಶ್ ನವುಲೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>