ಶಿವಮೊಗ್ಗ:ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ಮಲ್ಲೇಶ್ ಹುಲ್ಲಮನಿ(73) ಅವರು ಭಾನುವಾರ ನಿಧನರಾದರು.
ಜಿಲ್ಲಾ ಕೋವಿಡ್ ನಿಯಂತ್ರಣ ಕಾರ್ಯ ಪಡೆಯ ಸದಸ್ಯರೂ ಆಗಿದ್ದ ಅವರಿಗೆ 20 ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದನಂತರ ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು.
ಭಾರತೀಯ ವೈದ್ಯಕೀಯ ಸಂಸ್ಥೆ,ಕೆಪಿಎಂಇಎ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಕೆಪಿಸಿಸಿ ವೈದ್ಯಕೀಯ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದರು.
ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಜಿಲ್ಲಾವೀರಶೈವ ಮಹಾಸಭಾ ಉಪಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ಎಚ್.ವಿ.ಮಹೇಶ್ವರಪ್ಪ, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಜ್ಯೋತಿಪ್ರಕಾಶ್, ಎಸ್. ಚಂದ್ರಕಾಂತ್, ಕಾಯಕಯೋಗಿ ಚನ್ನಬಸಪ್ಪ, ಎಸ್.ಪಿ. ದಿನೇಶ್, ಎಚ್.ಸಿ.ಯೋಗೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಬಂದ್:ಡಾ.ಮಲ್ಲೇಶ್ಅವರಗೌರವಾರ್ಥಆ.24ರಂದು ನಗರದಎಲ್ಲಾ ಖಾಸಗಿ ಆಸ್ಪತ್ರೆಗಳನ್ನುಬಂದ್ ಮಾಡಲುಐಎಂಎ ಶಿವಮೊಗ್ಗ ಘಟಕ ನಿರ್ಧಾರ ಕೈಗೊಂಡಿದೆ. ತುರ್ತು ಸೇವೆಗಗಳು ಎಂದಿನಂತೆ ಲಭ್ಯವಾಗಲಿವೆ.