ದೇಶಾಭಿಮಾನದ ಬಗ್ಗೆ ಸದಾ ಮಾತನಾಡುವ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರಧ್ವಜದ ಕುರಿತು ನೀಡಿರುವ ಹೇಳಿಕೆ ದೇಶದ್ರೋಹದ ವ್ಯಾಪ್ತಿಗೆ ಬರುತ್ತದೆ. ತಾವೊಬ್ಬ ಸಚಿವ ಎಂಬುದನ್ನು ಮರೆತು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಯೊಬ್ಬರೂ ಇದೇ ರೀತಿ ಹೇಳಿಕೆ ನೀಡುವ ಅಪಾಯವಿದೆ ಎಂದು ಡಿಎಸ್ಎಸ್ ಕಾರ್ಯಕರ್ತರು ಪ್ರತಿಪಾದಿಸಿದರು. ಪ್ರಮುಖರಾದ ಪರಮೇಶ್ವರ ದೂಗೂರು, ಧರ್ಮಣ್ಣ, ಸಚಿನ್, ಮನು, ನಾಗರಾಜ್, ಶೇಖರ್, ವೈ.ಎನ್. ಹುಬ್ಬಳ್ಳಿ, ಸಂದೀಪ, ಬಾಬುಶೆಟ್ಟಿ ಇದ್ದರು.