ಅಶೋಕ ಅವರು ಕ್ಲಾಸ್ ಒನ್ ಗುತ್ತಿಗೆದಾರರಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದ್ದರೂ ಅದನ್ನು ಮರೆಮಾಚಿದ್ದರು. ಇದನ್ನು ಪ್ರಶ್ನಿಸಿ ಅವರ ಪ್ರತಿಸ್ಪರ್ಧಿ ಎಚ್.ಎನ್. ಗೋಪಾಲ ಹೀಲಗೋಡು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ಹಿರಿಯ ನ್ಯಾಯಾಧೀಶ ರಾದ ಕೆ. ಪುಷ್ಪಲತಾ ಅವರು ಅಶೋಕರವರ ಸದಸ್ಯತ್ವ ಅನರ್ಹ ಎಂದೂ ಮತ್ತು ಕೇವಲ 3 ಮತಗಳ ಅಂತರದಲ್ಲಿ ಸೋತಿದ್ದ ಎಚ್.ಎನ್. ಗೋಪಾಲ ಹೀಲಗೋಡು ಅವರು ಸದಸ್ಯರಾಗಿ ಮುಂದುವರಿಸಬಹುದು ಎಂದೂ ತೀರ್ಪು ನೀಡಿದ್ದಾರೆ.