‘ಬರ ಬಂದರೆ ಪರಿಹಾರ ವಿಷಯದಲ್ಲಿ ನಡೆಯುವ ಭ್ರಷ್ಟಾಚಾರದ ಮೇಲಾಟಗಳು, ಕೋವಿಡ್ ಸಮಯದಲ್ಲೂ ಪುನರಾವರ್ತನೆ ಯಾಗಿವೆ. ನದಿ ತಟದ ಹೆಣಗಳ ರಾಶಿ, ಆಮ್ಲಜನಕ ಮತ್ತು ವೆಂಟಿಲೇಟರ್ಗಳ ಖರೀದಿಗಳನ್ನು ಮಾಧ್ಯಮಗಳು ಪ್ರಶ್ನಿಸದೇ ಹೋಗಿದ್ದರೆ, ಸರ್ಕಾರಗಳನ್ನು ಎಚ್ಚರಿಸದಿದ್ದರೆ ಈಗಿನದ್ದಕ್ಕಿಂತ ನಾಲ್ಕು ಪಟ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದ್ದವು. ಮಾಧ್ಯಮ ಗಳು ಸಮಾಜ–ಸರ್ಕಾರಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.