ಶಿವಮೊಗ್ಗ: ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮೃತ ಹರ್ಷ ವಿರುದ್ಧ ಇಲ್ಲಿನ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.
ಇತರೆ ಕೋಮಿನ ಯುವಕರ ಜತೆ ಸಂಘರ್ಷ, ಇತರೆ ಕೋಮುಗಳ ಭಾವನೆ ಕೆರಳಿಸುವ ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಆರೋಪ ಅವರ ಮೇಲಿತ್ತು.
ಶಿವಮೊಗ್ಗ ನಗರದ ಎಂಜಿನಿಯರ್ ಒಬ್ಬರ ಹತ್ತಿರ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಹಿಂದುತ್ವ, ಗೋ ರಕ್ಷಣೆಯಂತಹ ವಿಚಾರಗಳಲ್ಲಿ ಸದಾ ಧ್ವನಿ ಎತ್ತುತ್ತಿದ್ದರು. ಮುಸ್ಲಿಂ ಯುವಕರಿಂದ ಈಚೆಗೆ ಜೀವಬೆದರಿಕೆ ಬಂದಿತ್ತು.