ಸರ್ಕಾರಿ ಸರ್ವೆಯರ್ಗಳ ಸಹಾಯದಿಂದ ಸರ್ವೆ ನಡೆಸಿ ಕೆರೆಗೆ ಸಂಬಂಧಪಟ್ಟ ಕಂದಾಯ ದಾಖಲೆಗಳಲ್ಲಿ ಇರುವ ವಿಸ್ತೀರ್ಣ ಹಾಗೂ ಸ್ಥಳದಲ್ಲಿರುವ ಕೆರೆಯ ವಿಸ್ತೀರ್ಣ ಎಷ್ಟು, ಒಂದು ವೇಳೆ ಕೆರೆ ಒತ್ತುವರಿಯಾಗಿದ್ದರೆ ಒತ್ತುವರಿಯ ವಿಸ್ತೀರ್ಣವೆಷ್ಟು ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ.