<p><strong>ಶಿವಮೊಗ್ಗ</strong>: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬೆಂಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಹಸಿರು ಹೊದ್ದು ಕಂಗೊಳಿಸುತ್ತಿದ್ದ ಬೆಳೆ, ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಒಣಗಿ ಹೋದಂತೆ ಕಾಣುತ್ತಿದೆ. ಬೆಳೆಯಲ್ಲಿ ಹೀಗೆ ಅತಿ ವೇಗದ ಬದಲಾವಣೆಯಾಗುತ್ತಿರುವುದನ್ನು ಕಂಡು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.</p>.<p>ಮೊದಲ ಬಾರಿಗೆ ಈ ಭಾಗದಲ್ಲಿ ಶುಂಠಿಗೆ ‘ಫೈರಿಕ್ಯುಲಾರಿಯಾ’ ಎಂಬ ಶಿಲೀಂಧ್ರ ರೋಗ ದೊಡ್ಡ ಪ್ರಮಾಣದಲ್ಲಿ ಬಾಧಿಸಿದೆ. ಬೆಳೆ ಸುಟ್ಟಂತೆ ಕಾಣುವುದರಿಂದ ರೈತರು ಅದನ್ನು ಬೆಂಕಿ ರೋಗ ಎಂಬ ಹೆಸರಿನಿಂದ ಕರೆಯುತ್ತಿದ್ದಾರೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಈ ರೋಗ, ಹಂಗಾಮಿನ ಕೊನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಬಾಧಿಸಿತ್ತು. ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಎಂ.ವೈ.ಉಲ್ಲಾಸ್ ಹೇಳುತ್ತಾರೆ.</p>.<p>ಈ ರೋಗಕ್ಕೆ ತುತ್ತಾಗಿರುವ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಮೂಡಿ, ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸುಟ್ಟಂತೆ ಭಾಸವಾಗುತ್ತವೆ. ಕೆಲವು ಶುಂಠಿ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಈ ರೋಗ ಬಾಧೆಗೊಳಗಾದ ತಾಕುಗಳು ಕಳೆ ನಾಶಕ ಸಿಂಪಡಿಸಿರುವಂತೆ ಕಾಣುತ್ತವೆ.</p>.<p><strong>ಶೇ 90ರಷ್ಟು ಬಾಧೆ:</strong></p>.<p>‘ನಮ್ಮಲ್ಲಿ ಶೇ 90ರಷ್ಟು ಬೆಳೆಗೆ ಶಿಲೀಂಧ್ರ ಬಾಧಿಸಿದೆ. ಕಳೆದ ವರ್ಷ ಬೆಳೆಯ ಕೊನೆಯ ಹಂತದಲ್ಲಿ ರೋಗ ಕಾಣಿಸಿಕೊಂಡಿತ್ತು. ಆದರೆ ಈ ವರ್ಷ ಅತಿಯಾದ ತೇವಾಂಶವಿರುವುದರಿಂದ ಬೆಳೆಗೆ ಪೂರ್ವಾರ್ಧದಲ್ಲಿಯೇ ರೋಗದ ಹಾವಳಿ ಹೆಚ್ಚಾಗಿದೆ’ ಎಂದು ಆನಂದಪುರದ ಶುಂಠಿ ಬೆಳೆಗಾರ ಎಚ್.ಸಿ.ಸತೀಶಚಂದ್ರ ಹೇಳುತ್ತಾರೆ. ಅವರು ಮೂರು ಎಕರೆಯಲ್ಲಿ ಶುಂಠಿ ನಾಟಿ ಮಾಡಿದ್ದು, ಸಂಪೂರ್ಣ ರೋಗ ಬಾಧೆಗೆ ತುತ್ತಾಗಿದೆ.</p>.<p><strong>ಔಷಧೋಪಚಾರದ ಕಿವಿಮಾತು:</strong></p>.<p>ರೋಗದ ಹಾವಳಿ ಪ್ರಾರಂಭಿಕ ಹಂತದಲ್ಲಿ ಇದ್ದರೆ, ಅಂದರೆ ಕಪ್ಪುಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡುಬಂದಲ್ಲಿ, ತಕ್ಷಣವೇ ಟೆಬುಕೊನಜೋಲ್ 1 ಎಂಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅದರೊಟ್ಟಿಗೆ ಪ್ರಾಪಿಕೊನಜೋಲ್ 1 ಎಂಎಲ್ ಪ್ರತಿ ಲೀಟರ್ಗೆ ಬೆರೆಸಿ ಸಿಂಪಡಿಸಬೇಕು. ರೋಗ ಕಡಿಮೆ ಆಗುವವರೆಗೂ ಯಾವುದೇ ರಾಸಾಯನಿಕ ಗೊಬ್ಬರ ಬಳಸಬಾರದು ಎಂದು ಪ್ರೊ.ಉಲ್ಲಾಸ್ ಸಲಹೆ ನೀಡುತ್ತಾರೆ.</p>.<p>ಬಾಧೆ ತೀವ್ರವಾದ ತಾಕುಗಳಲ್ಲಿ ಸಾಧ್ಯವಾದಷ್ಟು ಬೇಗ ಔಷಧಿ ಸಿಂಪರಣೆ ಮಾಡುವುದು ಸೂಕ್ತ. 15 ದಿನಗಳ ಅಂತರದಲ್ಲಿ ಸಿಂಪಡಣೆ ಪುನರಾವರ್ತಿಸಬೇಕು. ಈ ರೋಗವು ಶೀಘ್ರ ಪಸರಿಸುತ್ತಿದೆ. ಇದರಿಂದ ಎಲ್ಲಾ ಬೆಳೆಗಾರರು ಶಿಲೀಂಧ್ರ ನಾಶಕಗಳನ್ನು ಸಿಂಪಡಿಸುವುದು ಹೆಚ್ಚು ಸೂಕ್ತ.</p>.<p>ಒಂದು ಲೀಟರ್ ನೀರಿನಲ್ಲಿ ಎರಡು ಗ್ರಾಂ ಮ್ಯಾನ್ಕೋಜೆಬ್ ಬೆರೆಸಿ ಶುಂಠಿ ಬೀಜವನ್ನು ಆ ದ್ರಾವಣದಲ್ಲಿ 30 ನಿಮಿಷ ನೆನೆಸಿಟ್ಟರೆ ರೋಗವನ್ನು ನಿಯಂತ್ರಿಸಬಹುದಾಗಿದೆ. ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಈ ರೋಗದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಅದರ ಪೂರ್ತಿ ವಿವರ ಅದರ ಜಾಲತಾಣದಲ್ಲಿ ಲಭ್ಯವಿದೆ ಎನ್ನುತ್ತಾರೆ.</p>.<div><blockquote>ಅತಿಯಾದ ತೇವಾಂಶ ಈ ರೋಗ ಹರಡಲು ಕಾರಣ. ಈ ಬಾರಿ ಮಳೆ ಹೆಚ್ಚಾಗಿದೆ. ರೋಗವು ಕಡಿಮೆ ಅವಧಿಯಲ್ಲಿ ವ್ಯಾಪಿಸಲು ಇದು ಕಾರಣವಾಗಿದೆ </blockquote><span class="attribution">– ಎಂ.ವೈ.ಉಲ್ಲಾಸ್ ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ</span></div>.<div><blockquote>ಔಷಧಿ ಸಿಂಪಡಿಸೋಣ ಎಂದರೆ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಅವಕಾಶ ಕೊಡುತ್ತಿಲ್ಲ. ಈ ಹಂಗಾಮಿನ ಶುಂಠಿ ಬೆಳೆ ಕೈತಪ್ಪಿದಂತೆ ತೋರುತ್ತಿದೆ </blockquote><span class="attribution">– ಎಚ್.ಸಿ. ಸತೀಶ್ಚಂದ್ರ, ಶುಂಠಿ ಬೆಳೆಗಾರ ಆನಂದಪುರ</span></div>.<div><blockquote>ಮೇ ತಿಂಗಳಲ್ಲಿ ಮಳೆ ಹೆಚ್ಚು ಸುರಿದ ಕಾರಣ ಶುಂಠಿಗೆ ಶಿಲೀಂಧ್ರ ಬಾಧೆ ವ್ಯಾಪಕಗೊಂಡಿದೆ. ಮಳೆ ಕಡಿಮೆಯಾದ ಮೇಲೆ ಔಷಧಿ ಸಿಂಪಡಿಸಲು ಬೆಳೆಗಾರರಿಗೆ ಹೇಳಿದ್ದೇವೆ </blockquote><span class="attribution">– ಜಿ.ಸವಿತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಿವಮೊಗ್ಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬೆಂಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಹಸಿರು ಹೊದ್ದು ಕಂಗೊಳಿಸುತ್ತಿದ್ದ ಬೆಳೆ, ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಒಣಗಿ ಹೋದಂತೆ ಕಾಣುತ್ತಿದೆ. ಬೆಳೆಯಲ್ಲಿ ಹೀಗೆ ಅತಿ ವೇಗದ ಬದಲಾವಣೆಯಾಗುತ್ತಿರುವುದನ್ನು ಕಂಡು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.</p>.<p>ಮೊದಲ ಬಾರಿಗೆ ಈ ಭಾಗದಲ್ಲಿ ಶುಂಠಿಗೆ ‘ಫೈರಿಕ್ಯುಲಾರಿಯಾ’ ಎಂಬ ಶಿಲೀಂಧ್ರ ರೋಗ ದೊಡ್ಡ ಪ್ರಮಾಣದಲ್ಲಿ ಬಾಧಿಸಿದೆ. ಬೆಳೆ ಸುಟ್ಟಂತೆ ಕಾಣುವುದರಿಂದ ರೈತರು ಅದನ್ನು ಬೆಂಕಿ ರೋಗ ಎಂಬ ಹೆಸರಿನಿಂದ ಕರೆಯುತ್ತಿದ್ದಾರೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಈ ರೋಗ, ಹಂಗಾಮಿನ ಕೊನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಬಾಧಿಸಿತ್ತು. ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಎಂ.ವೈ.ಉಲ್ಲಾಸ್ ಹೇಳುತ್ತಾರೆ.</p>.<p>ಈ ರೋಗಕ್ಕೆ ತುತ್ತಾಗಿರುವ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಮೂಡಿ, ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸುಟ್ಟಂತೆ ಭಾಸವಾಗುತ್ತವೆ. ಕೆಲವು ಶುಂಠಿ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಈ ರೋಗ ಬಾಧೆಗೊಳಗಾದ ತಾಕುಗಳು ಕಳೆ ನಾಶಕ ಸಿಂಪಡಿಸಿರುವಂತೆ ಕಾಣುತ್ತವೆ.</p>.<p><strong>ಶೇ 90ರಷ್ಟು ಬಾಧೆ:</strong></p>.<p>‘ನಮ್ಮಲ್ಲಿ ಶೇ 90ರಷ್ಟು ಬೆಳೆಗೆ ಶಿಲೀಂಧ್ರ ಬಾಧಿಸಿದೆ. ಕಳೆದ ವರ್ಷ ಬೆಳೆಯ ಕೊನೆಯ ಹಂತದಲ್ಲಿ ರೋಗ ಕಾಣಿಸಿಕೊಂಡಿತ್ತು. ಆದರೆ ಈ ವರ್ಷ ಅತಿಯಾದ ತೇವಾಂಶವಿರುವುದರಿಂದ ಬೆಳೆಗೆ ಪೂರ್ವಾರ್ಧದಲ್ಲಿಯೇ ರೋಗದ ಹಾವಳಿ ಹೆಚ್ಚಾಗಿದೆ’ ಎಂದು ಆನಂದಪುರದ ಶುಂಠಿ ಬೆಳೆಗಾರ ಎಚ್.ಸಿ.ಸತೀಶಚಂದ್ರ ಹೇಳುತ್ತಾರೆ. ಅವರು ಮೂರು ಎಕರೆಯಲ್ಲಿ ಶುಂಠಿ ನಾಟಿ ಮಾಡಿದ್ದು, ಸಂಪೂರ್ಣ ರೋಗ ಬಾಧೆಗೆ ತುತ್ತಾಗಿದೆ.</p>.<p><strong>ಔಷಧೋಪಚಾರದ ಕಿವಿಮಾತು:</strong></p>.<p>ರೋಗದ ಹಾವಳಿ ಪ್ರಾರಂಭಿಕ ಹಂತದಲ್ಲಿ ಇದ್ದರೆ, ಅಂದರೆ ಕಪ್ಪುಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡುಬಂದಲ್ಲಿ, ತಕ್ಷಣವೇ ಟೆಬುಕೊನಜೋಲ್ 1 ಎಂಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅದರೊಟ್ಟಿಗೆ ಪ್ರಾಪಿಕೊನಜೋಲ್ 1 ಎಂಎಲ್ ಪ್ರತಿ ಲೀಟರ್ಗೆ ಬೆರೆಸಿ ಸಿಂಪಡಿಸಬೇಕು. ರೋಗ ಕಡಿಮೆ ಆಗುವವರೆಗೂ ಯಾವುದೇ ರಾಸಾಯನಿಕ ಗೊಬ್ಬರ ಬಳಸಬಾರದು ಎಂದು ಪ್ರೊ.ಉಲ್ಲಾಸ್ ಸಲಹೆ ನೀಡುತ್ತಾರೆ.</p>.<p>ಬಾಧೆ ತೀವ್ರವಾದ ತಾಕುಗಳಲ್ಲಿ ಸಾಧ್ಯವಾದಷ್ಟು ಬೇಗ ಔಷಧಿ ಸಿಂಪರಣೆ ಮಾಡುವುದು ಸೂಕ್ತ. 15 ದಿನಗಳ ಅಂತರದಲ್ಲಿ ಸಿಂಪಡಣೆ ಪುನರಾವರ್ತಿಸಬೇಕು. ಈ ರೋಗವು ಶೀಘ್ರ ಪಸರಿಸುತ್ತಿದೆ. ಇದರಿಂದ ಎಲ್ಲಾ ಬೆಳೆಗಾರರು ಶಿಲೀಂಧ್ರ ನಾಶಕಗಳನ್ನು ಸಿಂಪಡಿಸುವುದು ಹೆಚ್ಚು ಸೂಕ್ತ.</p>.<p>ಒಂದು ಲೀಟರ್ ನೀರಿನಲ್ಲಿ ಎರಡು ಗ್ರಾಂ ಮ್ಯಾನ್ಕೋಜೆಬ್ ಬೆರೆಸಿ ಶುಂಠಿ ಬೀಜವನ್ನು ಆ ದ್ರಾವಣದಲ್ಲಿ 30 ನಿಮಿಷ ನೆನೆಸಿಟ್ಟರೆ ರೋಗವನ್ನು ನಿಯಂತ್ರಿಸಬಹುದಾಗಿದೆ. ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಈ ರೋಗದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಅದರ ಪೂರ್ತಿ ವಿವರ ಅದರ ಜಾಲತಾಣದಲ್ಲಿ ಲಭ್ಯವಿದೆ ಎನ್ನುತ್ತಾರೆ.</p>.<div><blockquote>ಅತಿಯಾದ ತೇವಾಂಶ ಈ ರೋಗ ಹರಡಲು ಕಾರಣ. ಈ ಬಾರಿ ಮಳೆ ಹೆಚ್ಚಾಗಿದೆ. ರೋಗವು ಕಡಿಮೆ ಅವಧಿಯಲ್ಲಿ ವ್ಯಾಪಿಸಲು ಇದು ಕಾರಣವಾಗಿದೆ </blockquote><span class="attribution">– ಎಂ.ವೈ.ಉಲ್ಲಾಸ್ ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ</span></div>.<div><blockquote>ಔಷಧಿ ಸಿಂಪಡಿಸೋಣ ಎಂದರೆ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಅವಕಾಶ ಕೊಡುತ್ತಿಲ್ಲ. ಈ ಹಂಗಾಮಿನ ಶುಂಠಿ ಬೆಳೆ ಕೈತಪ್ಪಿದಂತೆ ತೋರುತ್ತಿದೆ </blockquote><span class="attribution">– ಎಚ್.ಸಿ. ಸತೀಶ್ಚಂದ್ರ, ಶುಂಠಿ ಬೆಳೆಗಾರ ಆನಂದಪುರ</span></div>.<div><blockquote>ಮೇ ತಿಂಗಳಲ್ಲಿ ಮಳೆ ಹೆಚ್ಚು ಸುರಿದ ಕಾರಣ ಶುಂಠಿಗೆ ಶಿಲೀಂಧ್ರ ಬಾಧೆ ವ್ಯಾಪಕಗೊಂಡಿದೆ. ಮಳೆ ಕಡಿಮೆಯಾದ ಮೇಲೆ ಔಷಧಿ ಸಿಂಪಡಿಸಲು ಬೆಳೆಗಾರರಿಗೆ ಹೇಳಿದ್ದೇವೆ </blockquote><span class="attribution">– ಜಿ.ಸವಿತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಿವಮೊಗ್ಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>