ಗ್ರಾಮದ ದಾಸ ಮನೆತನದ ಆರು ಮಂದಿ ಹನುಮಂತ ದೇವರ ಭಕ್ತರು ಒಂದು ವಾರದಿಂದ ಹಾಲು, ಹಣ್ಣು ಸೇವಿಸುತ್ತಾರೆ. ಜಾತ್ರೆ ಮರು ದಿನ ಬೇರು ಸಹಿತ ಮರವನ್ನು ಕಿತ್ತು ತರಲು ಬೆಳಿಗ್ಗೆ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೈಯಲ್ಲಿ ಕತ್ತಿ ಹಿಡಿದು ಪ್ರತ್ಯೇಕವಾಗಿ ವಿವಿಧ ದಿಕ್ಕುಗಳಿಗೆ ಗ್ರಾಮದಿಂದ ತೆರಳುತ್ತಾರೆ. ನಂತರ ಬೇರು ಸಹಿತ ಮರ ಕಿತ್ತು ಹೊತ್ತುಕೊಂಡು ಒಂದೇ ದಿಕ್ಕಿನಲ್ಲಿ ಇಳಿದು ಬರುತ್ತಾರೆ.