ಪೂರ್ವದಿಂದ ಪಶ್ಚಿಮಕ್ಕೆ ವಾಲುತ್ತಿರುವಸಂದಿಗ್ಧದಲ್ಲಿಭಾಷೆ ಹಲವು ಬಿಕ್ಕಟ್ಟುಎದುರಿಸುತ್ತಿದೆ.ಕನ್ನಡ ಅನ್ನ ಕೊಡದ ಭಾಷೆ ಎಂಬಆಪಾದನೆ ಎದುರಿಸುತ್ತಿದೆ. ಮಕ್ಕಳು ಕನ್ನಡವನ್ನು ಮರೆತೇ ಹೋಗಿದ್ದಾರೆ. ಒಂದು ಸರಳ ಪದ ಬರೆಯಲು ಬಾರದ ಪದವೀಧರರುಹೇರಳವಾಗಿ ಸಿಗುತ್ತಾರೆ. ಕನ್ನಡಿಗರು ಸಾಹಿತ್ಯ, ಇತಿಹಾಸ, ನಮ್ಮ ಸಂಸ್ಕೃತಿಯಿಂದಲೂ ದೂರ ಸರಿಯುತ್ತಿದ್ದಾರೆ.ಕನ್ನಡ ಭಾಷೆ ಕ್ಷೀಣಿಸುತ್ತಾ ಸಾಗಿದೆ. ಕನ್ನಡದ ಬೀಜಾಕ್ಷರವೇ ಕಳೆದುಹೋಗಿದೆ. ಅಸ್ತಿತ್ವವೇ ನಾಶವಾಗುವ ಹಂತಕ್ಕೆ ತಲುಪಿದೆ.ಕೇವಲ ಭಾಷೆ ಮಾತ್ರವಲ್ಲ. ಸಂಗೀತ, ಸಾಹಿತ್ಯ, ಕಲೆಗಳಲ್ಲೂ ಪಾಶ್ಚಿಮಾತ್ಯದ ಕಡೆ ಒಲವು ತೋರುತ್ತಿದ್ದಾರೆ. ಭಾವಗೀತೆಗಳು, ಹಳೆಯ ಚಲನಚಿತ್ರಗೀತೆಗಳು, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಬಯಲಾಟ, ಹಬ್ಬ ಹುಣ್ಣಿಮೆ, ಜಾತ್ರೆ, ಉಡುಪು, ಊಟ ಎಲ್ಲವೂ ಬದಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.