ತಾಲ್ಲೂಕು ಕಚೇರಿ ಹಾಗೂ ನಗರಸಭೆ ಯಲ್ಲಿ ಲಂಚ ಕೊಡದೆ ಯಾವ ಕೆಲಸವೂ ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದ್ದು, ಇದನ್ನು ತಡೆಯಲು ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ, ಎಚ್.ಕೆ. ಅಣ್ಣಪ್ಪ, ವಿ. ಜಿ. ಮನೋಹರ್, ಚಕ್ರಪಾಣಿ, ವಸಂತ ಶೇಟ್, ಸೋಮಶೇಖರ, ಇಕ್ಬಾಲ್ ಖಾನ್, ಸಿ.ಕೆ. ಪಟೇಲ್, ನಾಗರಾಜ್, ದ್ಯಾವಪ್ಪ ರೊಡ್ಡಿ ಇದ್ದರು.