<p><strong>ಶಿಕಾರಿಪುರ</strong>: ‘ಈ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸ ಈಗ ಹೆಚ್ಚಾಗುತ್ತಿರುವುದು ಶ್ಲಾಘನೀಯ’ ಎಂದು ತೊಗರ್ಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಿರಂಜನ್ ಹೇಳಿದರು. </p>.<p>ತಾಲ್ಲೂಕಿನ ತೊಗರ್ಸಿ ಗ್ರಾಮದಲ್ಲಿ ಈಚೆಗೆ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. </p>.<p>ಪ್ರೋ ಕಬ್ಬಡಿ ಆರಂಭಗೊಂಡ ನಂತರ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪಂದ್ಯಾವಳಿ ಆಯೋಜಿಸುವ ಪರಂಪರೆ ಹೆಚ್ಚಾಗಿದೆ. ವಾಲಿಬಾಲ್ ಕಬ್ಬಡಿ ಕ್ರೀಡೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದು ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳುವಂತಾಗಲಿ. ಕ್ರೀಡೆಯಲ್ಲಿ ಪಾಲ್ಗೊಂಡವರು ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು. </p>.<p>ಮಳೇಹಿರೇಮಠದ ಮಹಾಂತದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 20ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.</p>.<p>ಹೊಸಕೊಪ್ಪದ ಅಭಿಮನ್ಯು ಬಾಯ್ಸ್ ಪ್ರಥಮ ಸ್ಥಾನ (₹15,000), ಮಲ್ಲಿಕಾರ್ಜುನ ಬುಲ್ಸ್ ತೊಗರ್ಸಿ ದ್ವಿತೀಯ ಸ್ಥಾನ (₹7,500) ಹಾಗೂ ಹೊಸಕೆರೆ ಬಾಯ್ಸ್ ತೃತೀಯ ಸ್ಥಾನ ( ₹,3500) ಪಡೆದವು.</p>.<p>ಮುಖಂಡರಾದ ಸಣ್ಣಹನುಮಂತಪ್ಪ, ಪರಮೇಶ್ವರಪ್ಪ, ಚನ್ನವೀರಸ್ವಾಮಿ, ಬಸವಣ್ಯಯ್ಯ, ಮೋಹನ್ಗೌಡ್ರು, ಮಲ್ಲೇಶಪ್ಪ, ಆನಂದಯ್ಯ, ಸದಾನಂದ ಆಚಾರ್, ಶಿಕ್ಷಕ ಸಿದ್ಧಲಿಂಗಯ್ಯ, ಆಂಜನೇಯ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ</strong>: ‘ಈ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸ ಈಗ ಹೆಚ್ಚಾಗುತ್ತಿರುವುದು ಶ್ಲಾಘನೀಯ’ ಎಂದು ತೊಗರ್ಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಿರಂಜನ್ ಹೇಳಿದರು. </p>.<p>ತಾಲ್ಲೂಕಿನ ತೊಗರ್ಸಿ ಗ್ರಾಮದಲ್ಲಿ ಈಚೆಗೆ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. </p>.<p>ಪ್ರೋ ಕಬ್ಬಡಿ ಆರಂಭಗೊಂಡ ನಂತರ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪಂದ್ಯಾವಳಿ ಆಯೋಜಿಸುವ ಪರಂಪರೆ ಹೆಚ್ಚಾಗಿದೆ. ವಾಲಿಬಾಲ್ ಕಬ್ಬಡಿ ಕ್ರೀಡೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದು ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳುವಂತಾಗಲಿ. ಕ್ರೀಡೆಯಲ್ಲಿ ಪಾಲ್ಗೊಂಡವರು ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು. </p>.<p>ಮಳೇಹಿರೇಮಠದ ಮಹಾಂತದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 20ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.</p>.<p>ಹೊಸಕೊಪ್ಪದ ಅಭಿಮನ್ಯು ಬಾಯ್ಸ್ ಪ್ರಥಮ ಸ್ಥಾನ (₹15,000), ಮಲ್ಲಿಕಾರ್ಜುನ ಬುಲ್ಸ್ ತೊಗರ್ಸಿ ದ್ವಿತೀಯ ಸ್ಥಾನ (₹7,500) ಹಾಗೂ ಹೊಸಕೆರೆ ಬಾಯ್ಸ್ ತೃತೀಯ ಸ್ಥಾನ ( ₹,3500) ಪಡೆದವು.</p>.<p>ಮುಖಂಡರಾದ ಸಣ್ಣಹನುಮಂತಪ್ಪ, ಪರಮೇಶ್ವರಪ್ಪ, ಚನ್ನವೀರಸ್ವಾಮಿ, ಬಸವಣ್ಯಯ್ಯ, ಮೋಹನ್ಗೌಡ್ರು, ಮಲ್ಲೇಶಪ್ಪ, ಆನಂದಯ್ಯ, ಸದಾನಂದ ಆಚಾರ್, ಶಿಕ್ಷಕ ಸಿದ್ಧಲಿಂಗಯ್ಯ, ಆಂಜನೇಯ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>