<p><strong>ಕಾರ್ಗಲ್</strong>: ಶರಾವತಿ ಕೊಳ್ಳದ ಕೇಂದ್ರ ಪ್ರದೇಶವಾದ ಕಾರ್ಗಲ್ ಪಟ್ಟಣದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು.</p>.<p>ಪಟ್ಟಣದ ಕನ್ನಡ ಸಂಘದ ಆವರಣದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಲತಾ ಧ್ವಜಾರೋಹಣ ನೆರವೇರಿಸಿ ಅಲಂಕೃತ ಭುವನೇಶ್ವರಿ ತಾಯಿಯ ರಥಕ್ಕೆ ಚಾಲನೆ ನೀಡಿದರು.</p>.<p>ಶರಾವತಿ ಗೂಡ್ಸ್ ವಾಹನ ಚಾಲಕರ ಸಂಘದಲ್ಲಿ ಅಧ್ಯಕ್ಷ ಬಾಲು ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕ ಜೆ. ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು. ಜೋಕಾಲಿ ಆಟೊ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ಜಬೀಉಲ್ಲಾ ಧ್ವಜಾರೋಹಣ ನೆರವೇರಿಸಿ, ಅಂಧ ಶಿಕ್ಷಕ ಜಯಣ್ಣ ಅವರನ್ನು ಸನ್ಮಾನಿಸಿದರು.</p>.<p>ಶರಾವತಿ ವರ್ತಕರ ಸಂಘದ ಆವರಣದಲ್ಲಿ ಹಮಾಲಿ ಜಂಗ್ಲಿ ಸಾಬ್ ಅವರು ಧ್ವಜಾರೋಹಣ ನೆರವೇರಿಸಿದರು. ಶರಾವತಿ ವಾಹನ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ತಂಗರಾಜ್ ಧ್ವಜಾರೋಹಣ ನೆರವೇರಿಸಿದರು.</p>.<p>ಸ್ಥಳೀಯ ಸರ್ಕಾರಿ ಪ್ರೌಢಶಾಲೆ, ಕೆಪಿಸಿ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ ನಾಡಹಬ್ಬ ಆಚರಣೆಗೆ ವಿಶೇಷ ಕಳೆಯನ್ನು ನೀಡಿದರು. ಜೋಕಾಲಿ ಆಟೊ ಚಾಲಕರು ವಾದ್ಯ ಗೋಷ್ಠಿಗಳೊಂದಿಗೆ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ಆಕರ್ಷಕವಾಗಿ ಸಂಘಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಗಲ್</strong>: ಶರಾವತಿ ಕೊಳ್ಳದ ಕೇಂದ್ರ ಪ್ರದೇಶವಾದ ಕಾರ್ಗಲ್ ಪಟ್ಟಣದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು.</p>.<p>ಪಟ್ಟಣದ ಕನ್ನಡ ಸಂಘದ ಆವರಣದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಲತಾ ಧ್ವಜಾರೋಹಣ ನೆರವೇರಿಸಿ ಅಲಂಕೃತ ಭುವನೇಶ್ವರಿ ತಾಯಿಯ ರಥಕ್ಕೆ ಚಾಲನೆ ನೀಡಿದರು.</p>.<p>ಶರಾವತಿ ಗೂಡ್ಸ್ ವಾಹನ ಚಾಲಕರ ಸಂಘದಲ್ಲಿ ಅಧ್ಯಕ್ಷ ಬಾಲು ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕ ಜೆ. ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು. ಜೋಕಾಲಿ ಆಟೊ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ಜಬೀಉಲ್ಲಾ ಧ್ವಜಾರೋಹಣ ನೆರವೇರಿಸಿ, ಅಂಧ ಶಿಕ್ಷಕ ಜಯಣ್ಣ ಅವರನ್ನು ಸನ್ಮಾನಿಸಿದರು.</p>.<p>ಶರಾವತಿ ವರ್ತಕರ ಸಂಘದ ಆವರಣದಲ್ಲಿ ಹಮಾಲಿ ಜಂಗ್ಲಿ ಸಾಬ್ ಅವರು ಧ್ವಜಾರೋಹಣ ನೆರವೇರಿಸಿದರು. ಶರಾವತಿ ವಾಹನ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ತಂಗರಾಜ್ ಧ್ವಜಾರೋಹಣ ನೆರವೇರಿಸಿದರು.</p>.<p>ಸ್ಥಳೀಯ ಸರ್ಕಾರಿ ಪ್ರೌಢಶಾಲೆ, ಕೆಪಿಸಿ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ ನಾಡಹಬ್ಬ ಆಚರಣೆಗೆ ವಿಶೇಷ ಕಳೆಯನ್ನು ನೀಡಿದರು. ಜೋಕಾಲಿ ಆಟೊ ಚಾಲಕರು ವಾದ್ಯ ಗೋಷ್ಠಿಗಳೊಂದಿಗೆ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ಆಕರ್ಷಕವಾಗಿ ಸಂಘಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>