‘ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಳೆದ ತಿಂಗಳೇ ಮುಗಿದಿತ್ತು. ಆದರೆ ವಿವಿಯ ಸಿಬಿಸಿಎಸ್ ಪರಿನಿಯಮವನ್ನು ಯುಯುಸಿಎಂಎಸ್ ಸಾಫ್ಟ್ವೇರ್ಗೆ ಅಳವಡಿಸುವಲ್ಲಿ ತಾಂತ್ರಿಕ ತೊಡಕು ಎದುರಾಗಿತ್ತು. ಈಗ ರಾಜ್ಯಮಟ್ಟದ ನೋಡಲ್ ಅಧಿಕಾರಿಗಳ ಸಹಕಾರದೊಂದಿಗೆ ಸಮಸ್ಯೆ ಪರಿಹಾರವಾಗಿದ್ದು, ಫಲಿತಾಂಶ ನೀಡಲಾಗಿದೆ’ ಎಂದು ಪರೀಕ್ಷಾಂಗ ಕುಲಸಚಿವ ಎಸ್.ಎಂ.ಗೋಪಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.