ರಿಪ್ಪನ್ಪೇಟೆ: ಶಿವಮೊಗ್ಗ ತಾಲ್ಲೂಕಿನ ಹಳೇ ಮಂಡ್ಲಿ ನಿವಾಸಿ, ಕೂಲಿ ಕಾರ್ಮಿಕ ಮೈಲಾರಿ (42) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3–4 ವರ್ಷಗಳಿಂದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಹೊಸಳ್ಳಿ ಗ್ರಾಮದ ರಾಜು ಎಂಬುವವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ವಾರದ ಹಿಂದೆ ಗರ್ತಿಕೆರೆಗೆ ಹೋಗಿದ್ದ ಅವರು ಹಿಂದಿರುಗಿ ಬಂದಿರಲಿಲ್ಲ. ಈ ಕುರಿತು 2 ದಿನದ ಹಿಂದೆ ಕಾಣೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಡಹೊಸಳ್ಳಿ ಕಾಡಿನಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರು ನೋಡಿದಾಗ ವಾರದ ಹಿಂದೆಯೇ ಈತ ನೇಣಿಗೆ ಶರಣಾಗಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.