ಅಡಿಕೆ ಕೊಯ್ಲು ಮುಗಿದಿದ್ದು, ತೋಟಗಳಲ್ಲಿ ಸಿಂಗಾರ ಗರಿ ಬಿಚ್ಚಿ ಕಾಳು ಕಟ್ಟುತ್ತಿವೆ. ಮೋಡಕವಿದ ವಾತಾವರಣ, ಆಗಾಗ್ಗೆ ಸುರಿಯುವ ಅಕಾಲಿಕ ಮಳೆ, ತಾಪಮಾನದಲ್ಲಿನ ಏರುಪೇರಿನಿಂದಾಗಿ ಕಾಳುಕಟ್ಟಿ ಗಟ್ಟಿಯಾಗಬೇಕಿದ್ದ ಅಡಿಕೆ ಮೆಳೆಗಳು ಉದುರುತ್ತಿರುವುದು ರೈತರ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಬೆಳೆ ಉಳಿಸಿಕೊಳ್ಳಲು ರೈತರು ರಾಸಾಯನಿಕ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.