‘ಜಿಲ್ಲೆಯಲ್ಲಿ ಈಡಿಗ ಜನಾಂಗ ಪ್ರಬಲವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬಿಜೆಪಿಯಲ್ಲಿ ಕೇವಲ ಜಾತಿ ನೋಡಿ ಸ್ಥಾನ ಕೊಡುವ ಪರಿಪಾಠವಿಲ್ಲ. ಸೋಷಿಯಲ್ ಎಂಜಿನಿಯರಿಂಗ್ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದರೆ ನನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಪಕ್ಷದ ಮಾನದಂಡದಂತೆ ನನಗೂ ವಯಸ್ಸಾಗಿದೆ. ಮೂರು ಬಾರಿ ಶಾಸಕನಾಗಿರುವುದನ್ನು ಪರಿಗಣಿಸಿ ಸ್ಥಾನ ನೀಡುವ ಭರವಸೆ ಇದೆ’ ಎಂದು ಅವರು ಹೇಳಿದರು.