ನೀಲ್ಗಾಯ್ ಅನ್ನು ಎರಡು ವರ್ಷಗಳ ಹಿಂದೆ ಮೈಸೂರು ಮೃಗಾಲಯದಿಂದ ತರಲಾಗಿತ್ತು. ಸಿಂಹಧಾಮದಲ್ಲಿ ಈಚೆಗಷ್ಟೇ ಜಿಂಕೆಗಳು ಹಾಗೂ ನೀಲ್ಗಾಯ್ಗಳಿಗಾಗಿ ಪ್ರತ್ಯೇಕವಾಗಿ ಕೇಜ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಜಿಂಕೆಗಳ ಕೇಜ್ನಿಂದ ನೀಲ್ಗಾಯ್ಗಳನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಒಂದು ನೀಲ್ಗಾಯ್ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನೀಲ್ಗಾಯ್ ಸಾವಿಗೆ ಪರಸ್ಪರ ಜಗಳವೇ ಕಾರಣ ಎಂದೂ ಹೇಳಲಾಗುತ್ತಿದೆ.