<p>ಹೊಸನಗರ: ಕಾರ್ಯಕರ್ತರು ಸಂಘಟಿತರಾಗಿ ಪಕ್ಷಕ್ಕೆ ದುಡಿದಾಗ ಮಾತ್ರ ಪಕ್ಷ ಬಲವರ್ಧನೆ ಸಾಧ್ಯ. ಪಕ್ಷ ಸದೃಢವಾಗಿದ್ದಲ್ಲಿ ಉತ್ತಮ ಆಡಳಿತ ನಡೆಸಲು ಸಹಕಾರಿ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.</p>.<p>ಇಲ್ಲಿನ ಗಾಯಿತ್ರಿ ಮಂದಿರದಲ್ಲಿ ಶನಿವಾರ ನಡೆದ ಬಿಜೆಪಿ ಹೊಸನಗರ ಮಂಡಲ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.</p>.<p>ಬಿಜೆಪಿ ಕಾರ್ಯಕರ್ತರ ಸಾಂಘಿಕ ಹೋರಾಟದ ಪ್ರತೀಕವಾಗಿ ನಡೆದು ಬಂದ ಪಕ್ಷ. ಇಲ್ಲಿ ಕಾರ್ಯಕರ್ತರೇ ಜೀವಾಳ. ದೇಶದಲ್ಲಿ ನರೇಂದ್ರ ಮೋದಿ ಯಶಸ್ವಿ ಆಡಳಿತ ನೀಡಲು ಕಾರ್ಯಕರ್ತರ ಶಕ್ತಿಯೇ ಕಾರಣ. ಪಕ್ಷ ಸದೃಢ ಅಡಿಪಾಯದಲ್ಲಿ ಮೇಲೆದ್ದು ಬಂದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ<br />ಎಂದು ಹೇಳಿದರು.</p>.<p>‘ಕಾರ್ಯಕರ್ತರಾದ ನಾವು ಮೊದಲು ಪರಸ್ಪರ ವಿಶ್ವಾಸ ವೃದ್ಧಿಸಿಕೊ<br />ಳ್ಳಬೇಕು. ನಮ್ಮ ನಮ್ಮಲ್ಲಿ ಒಳಜಗಳ ಇದ್ದಲ್ಲಿ ಪರರಿಗೆ ಅನುಕೂಲವಾಗುವ ಫಲಿತಾಂಶ ಬರುತ್ತದೆ. ನಾವು ಸಂಘಟನೆಯ ಸೂಚನೆಯನ್ನು ಪಾಲಿ<br />ಸುವ ಗುಣ ಕಲಿತುಕೊಂಡಲ್ಲಿ ಯಾವುದೇ ಯುದ್ಧವನ್ನಾದರೂ ಗೆಲ್ಲಬಹುದು.ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮಲ್ಲಿನ ಅಸಮಾಧಾನದಿಂದ ನಾವು ಹೆಚ್ಚು ಸ್ಥಾನ ಗೆಲ್ಲಲಾಗಲಿಲ್ಲ. ನಾವು ಹೆಚ್ಚು ಸ್ಥಾನ ಗೆದ್ದಿದ್ದರೆ ಅಧಿಕಾರ ನಮ್ಮಲ್ಲಿಯೇ ಉಳಿಯುತ್ತಿತ್ತು’ ಎಂದರು.</p>.<p>ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಕಲ್ಯಾಣದ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ ಎಂದು<br />ಬೇಸರಿಸಿದರು.</p>.<p>ಶಾಸಕ ಆರಗ ಜ್ಞಾನೇಂದ್ರ, ‘ಪಕ್ಷ ನಿಷ್ಠೆ, ಶಿಸ್ತು ನಮ್ಮ ಪಕ್ಷದ ಆಧಾರ ಸ್ತಂಭಗಳು. ನಾವು ಅದನ್ನು ಚಾಚು ತಪ್ಪದೆ ಪಾಲಿಸಬೇಕಾಗಿದೆ. ಆಗ ಮಾತ್ರ ಯಶಸ್ಸು’ ಎಂದರು.</p>.<p>ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ಎ.ವಿ. ಮಲ್ಲಿಕಾರ್ಜುನ್, ತಾಲ್ಲೂಕು ಅಧ್ಯಕ್ಷ ಬೆಳಗೋಡು ಗಣಪತಿ, ಎನ್.ಆರ್. ದೇವಾನಂದ್, ಟೌನ್ ಘಟಕದ ಅಧ್ಯಕ್ಷ ಕೋಣೆಮನೆ ಶಿವಕುಮಾರ್, ತೀರ್ಥೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸನಗರ: ಕಾರ್ಯಕರ್ತರು ಸಂಘಟಿತರಾಗಿ ಪಕ್ಷಕ್ಕೆ ದುಡಿದಾಗ ಮಾತ್ರ ಪಕ್ಷ ಬಲವರ್ಧನೆ ಸಾಧ್ಯ. ಪಕ್ಷ ಸದೃಢವಾಗಿದ್ದಲ್ಲಿ ಉತ್ತಮ ಆಡಳಿತ ನಡೆಸಲು ಸಹಕಾರಿ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.</p>.<p>ಇಲ್ಲಿನ ಗಾಯಿತ್ರಿ ಮಂದಿರದಲ್ಲಿ ಶನಿವಾರ ನಡೆದ ಬಿಜೆಪಿ ಹೊಸನಗರ ಮಂಡಲ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.</p>.<p>ಬಿಜೆಪಿ ಕಾರ್ಯಕರ್ತರ ಸಾಂಘಿಕ ಹೋರಾಟದ ಪ್ರತೀಕವಾಗಿ ನಡೆದು ಬಂದ ಪಕ್ಷ. ಇಲ್ಲಿ ಕಾರ್ಯಕರ್ತರೇ ಜೀವಾಳ. ದೇಶದಲ್ಲಿ ನರೇಂದ್ರ ಮೋದಿ ಯಶಸ್ವಿ ಆಡಳಿತ ನೀಡಲು ಕಾರ್ಯಕರ್ತರ ಶಕ್ತಿಯೇ ಕಾರಣ. ಪಕ್ಷ ಸದೃಢ ಅಡಿಪಾಯದಲ್ಲಿ ಮೇಲೆದ್ದು ಬಂದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ<br />ಎಂದು ಹೇಳಿದರು.</p>.<p>‘ಕಾರ್ಯಕರ್ತರಾದ ನಾವು ಮೊದಲು ಪರಸ್ಪರ ವಿಶ್ವಾಸ ವೃದ್ಧಿಸಿಕೊ<br />ಳ್ಳಬೇಕು. ನಮ್ಮ ನಮ್ಮಲ್ಲಿ ಒಳಜಗಳ ಇದ್ದಲ್ಲಿ ಪರರಿಗೆ ಅನುಕೂಲವಾಗುವ ಫಲಿತಾಂಶ ಬರುತ್ತದೆ. ನಾವು ಸಂಘಟನೆಯ ಸೂಚನೆಯನ್ನು ಪಾಲಿ<br />ಸುವ ಗುಣ ಕಲಿತುಕೊಂಡಲ್ಲಿ ಯಾವುದೇ ಯುದ್ಧವನ್ನಾದರೂ ಗೆಲ್ಲಬಹುದು.ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮಲ್ಲಿನ ಅಸಮಾಧಾನದಿಂದ ನಾವು ಹೆಚ್ಚು ಸ್ಥಾನ ಗೆಲ್ಲಲಾಗಲಿಲ್ಲ. ನಾವು ಹೆಚ್ಚು ಸ್ಥಾನ ಗೆದ್ದಿದ್ದರೆ ಅಧಿಕಾರ ನಮ್ಮಲ್ಲಿಯೇ ಉಳಿಯುತ್ತಿತ್ತು’ ಎಂದರು.</p>.<p>ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಕಲ್ಯಾಣದ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ ಎಂದು<br />ಬೇಸರಿಸಿದರು.</p>.<p>ಶಾಸಕ ಆರಗ ಜ್ಞಾನೇಂದ್ರ, ‘ಪಕ್ಷ ನಿಷ್ಠೆ, ಶಿಸ್ತು ನಮ್ಮ ಪಕ್ಷದ ಆಧಾರ ಸ್ತಂಭಗಳು. ನಾವು ಅದನ್ನು ಚಾಚು ತಪ್ಪದೆ ಪಾಲಿಸಬೇಕಾಗಿದೆ. ಆಗ ಮಾತ್ರ ಯಶಸ್ಸು’ ಎಂದರು.</p>.<p>ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ಎ.ವಿ. ಮಲ್ಲಿಕಾರ್ಜುನ್, ತಾಲ್ಲೂಕು ಅಧ್ಯಕ್ಷ ಬೆಳಗೋಡು ಗಣಪತಿ, ಎನ್.ಆರ್. ದೇವಾನಂದ್, ಟೌನ್ ಘಟಕದ ಅಧ್ಯಕ್ಷ ಕೋಣೆಮನೆ ಶಿವಕುಮಾರ್, ತೀರ್ಥೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>