ಶಿವಮೊಗ್ಗ: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವಕಾನ್ಪುರ ವೈದ್ಯೆಡಾ.ಆರತಿ ಲಾಲ್ ಚಂದಾನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮುಸ್ಲಿಮರ ವಿರುದ್ಧ ಕೀಳುಮಟ್ಟದ ಆಪಾದನೆ ಮಾಡಿದ್ದಾರೆ. ವೈದ್ಯಕೀಯ ವೃತ್ತಿಗೆ ಕಳಂಕ ತಂದಿದ್ದಾರೆ. ಅವರ ವೈದ್ಯಕೀಯ ಮಾನ್ಯತೆ,ಆಸ್ಪತ್ರೆ ಪರವಾನಗಿ ರದ್ದುಗೊಳಿಸಬೇಕು.ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೈದ್ಯ ವೃತ್ತಿ ಸ್ವೀಕರಿಸುವಾಗ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಎಂದು ಪ್ರಮಾಣ ಮಾಡುತ್ತಾರೆ. ರೋಗ ವಾಸಿಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಚಂದಾನಿ ಸಂವಿಧಾನ ಉಲ್ಲಂಘಿಸಿ ವೈದ್ಯ ವೃತ್ತಿಯ ಪ್ರಮಾಣವಚನ ಮರೆತಿದ್ದಾರೆ. ಮುಸ್ಲಿಮರು, ತಬ್ಲಿಗ್ಜಮಾತ್ ರೋಗಿಗಳ ಕುರಿತು ತಪ್ಪು ಮಾಹಿತಿಗಳನ್ನು ಮಾಧ್ಯಮಗಳು, ಸರ್ಕಾರಕ್ಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಮುಸ್ಲಿಮರು ಆಸ್ಪತ್ರೆಯಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ.ಮಾಂಸದ ಆಹಾರ ಕೇಳುತ್ತಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ. ಮುಸ್ಲಿಮರು ಭಯೋತ್ಪಾದಕರು. ಜೈಲಿಗೆ ಕಳಿಸಬೇಕಾದವರಿಗೆ ವಿಐಪಿ ಚಿಕಿತ್ಸೆ ನೀಡಿ, ದೇಶದ ಸಂಪನ್ಮೂಲ ಖಾಲಿ ಮಾಡುತ್ತಿದ್ದೇವೆ. ಆತಿಥ್ಯ, ಚಿಕಿತ್ಸೆ, ಔಷಧ, ಆಂಬುಲೆನ್ಸ್ ಮೇಲೆ ವ್ಯರ್ಥ ಖರ್ಚು ಮಾಡುತ್ತಿದ್ದೇವೆ. ಅವರಲ್ಲನ್ನೆಲ್ಲ ಕಾಡಿಗೆಕಳುಹಿಸಬೇಕುಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ದೂರಿದರು.
ಸಂಘಟನೆಯಅಧ್ಯಕ್ಷ ರಿಯಾಜ್ ಅಹಮದ್,ಸೈಯದ್ ಬಷೀರ್, ಜಾವಿದ್, ಸಲೀಮ್ ಉಲ್ಲಾ, ಅಯೂಬ್ ಖಾನ್ , ಖಲೀಮುಲ್ಲಾ, ನವೀದ್ಮನವಿ ಸಲ್ಲಿಸಿದರು.