ನಾಟಕಗಳ ಅನುಗುಣವಾಗಿ ಇಡೀ ರಂಗಾಯಣವು ಪ್ರಾಕೃತಿಕ ವಾಸ್ತುಶಿಲ್ಪದ ಸೊಬಗಿನಲ್ಲಿ ಕಂಗೊಳಿಸುತ್ತಿದೆ. ಭವನದ ಪ್ರವೇಶ ದ್ವಾರದಲ್ಲಿ ಬೃಹತ್ ಮ್ಯೂರಲ್ ಆರ್ಟ್ಗಳುಮತ್ತು ಮುಖವಾಡಗಳು ಆಕರ್ಷಕವಾಗಿದ್ದು, ಮೊದಲ ಮಹಡಿಯ ಭಿತ್ತಿಗಳಿಗೆ ಕನ್ನಡದ ಪ್ರಮುಖ ನಾಟಕಗಳಾದ ‘ಚಾಣಕ್ಯ ಪ್ರಪಂಚ’, ‘ಸಾಹೇಬ್ರು ಬರುತ್ತಾರೆ’, ‘ಸಾಮ್ರಾಟ್ ಅಶೋಕ’, ‘ಇದಕ್ಕೆ ಕೊನೆ ಎಂದು’? ಮಾತ್ರವಲ್ಲದೆ ಜಾನಪದ ಕಲಾ ಪ್ರಕಾರವಾದ ಸೂತ್ರದ ಗೊಂಬೆಯಾಟದ ದೃಶ್ಯಾವಳಿಗಳು, ವಿವಿಧ ಕಲಾಪ್ರಕಾರಗಳು ಅನಾವರಣಗೊಂಡಿವೆ.