<p><strong>ಶಿವಮೊಗ್ಗ: </strong>ವಿನೋಬನಗರ 100 ಅಡಿ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.</p>.<p>ವಿನೋಬನಗರದ ಸವಿ ಬೇಕರಿಯಿಂದ ಹಾಲ್ಕೊಳದವರೆಗೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ಕಿರಿದಾಗಿ ಜನರ ಓಡಾಟಕ್ಕೂ ತೊಂದರೆಯಾಗಲಿದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹಲವು ಕಡೆ ಅನಗತ್ಯವಾಗಿಚರಂಡಿಎತ್ತರ ಮಾಡಲಾಗಿದೆ.ಇದರಿಂದ ನೀರು ಸರಾಗವಾಗಿ ಹೋಗಲು ಸಾಧ್ಯವಿಲ್ಲ ಎಂದುದೂರಿದರು.</p>.<p>ರಸ್ತೆಯಲ್ಲಿ ಎರಡು ವರ್ಷಗಳ ಹಿಂದೆ ಕೋಟ್ಯಂತರಹಣ ಖರ್ಚುಮಾಡಿ ಯುಜಿ ಕೇಬಲ್ ಅಳವಡಿಸಲಾಗಿದೆ. ಈಗ ಸ್ಮಾರ್ಟ್ಸಿಟಿಹೆಸರಲ್ಲಿ ಅದೇ ಕಾಮಗಾರಿ ಮುಂದುವರಿಸಲಾಗುತ್ತಿದೆ. ಈಗಿರುವ ಕಾಮಗಾರಿಯ ಪ್ರಕಾರ ವಾಣಿಜ್ಯ ಮತ್ತು ವಾಸದ ಕಟ್ಟಡಗಳಿಗೆ ಮೊದಲು ಯುಜಿಡಿ ಸಂಪರ್ಕವನ್ನು ನಗರಪಾಲಿಕೆ ಕಡ್ಡಾಯಗೊಳಿಸಬೇಕು. ನಂತರ ಕಾಮಗಾರಿ ಮುಂದುವರಿಸಬೇಕು ಎಂದುಒತ್ತಾಯಿಸಿದರು.</p>.<p>ರಸ್ತೆ ಕಿರಿದಾದರೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೂ ಸಮಸ್ಯೆಯಾಗುತ್ತದೆ. ಜನರು ಅಂಗಡಿ, ಮನೆಗಳಿಂದ ಸರಾಗವಾಗಿ ಓಡಾಡಲು ಚರಂಡಿ ಎತ್ತರ ಕನಿಷ್ಠ 3 ಅಥವಾ 4 ಇಂಚು ತಗ್ಗಿಸಬೇಕು. ಈ ರಸ್ತೆಯಲ್ಲಿ ಬರುವ ಮನೆ, ಮಳಿಗೆಗಳಿಗೆ 24X7ನೀರಿನ ಸಂಪರ್ಕ ಕಲ್ಪಿಸದೇಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದು ಅವೈಜ್ಞಾನಿಕ ಎಂದು ದೂರದಿರು.</p>.<p>ಒಕ್ಕೂಟದ ಕೆ.ವಿ.ವಸಂತಕುಮಾರ್, ಮುಖಂಡರಾದ ಎಸ್.ಬಿ.ಅಶೋಕ್ಕುಮಾರ್, ಸತೀಶ್ ಕುಮಾರ್ ಶೆಟ್ಟಿ, ರುದ್ರಪ್ಪ ಮತ್ತಿತರರು ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ವಿನೋಬನಗರ 100 ಅಡಿ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.</p>.<p>ವಿನೋಬನಗರದ ಸವಿ ಬೇಕರಿಯಿಂದ ಹಾಲ್ಕೊಳದವರೆಗೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ಕಿರಿದಾಗಿ ಜನರ ಓಡಾಟಕ್ಕೂ ತೊಂದರೆಯಾಗಲಿದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹಲವು ಕಡೆ ಅನಗತ್ಯವಾಗಿಚರಂಡಿಎತ್ತರ ಮಾಡಲಾಗಿದೆ.ಇದರಿಂದ ನೀರು ಸರಾಗವಾಗಿ ಹೋಗಲು ಸಾಧ್ಯವಿಲ್ಲ ಎಂದುದೂರಿದರು.</p>.<p>ರಸ್ತೆಯಲ್ಲಿ ಎರಡು ವರ್ಷಗಳ ಹಿಂದೆ ಕೋಟ್ಯಂತರಹಣ ಖರ್ಚುಮಾಡಿ ಯುಜಿ ಕೇಬಲ್ ಅಳವಡಿಸಲಾಗಿದೆ. ಈಗ ಸ್ಮಾರ್ಟ್ಸಿಟಿಹೆಸರಲ್ಲಿ ಅದೇ ಕಾಮಗಾರಿ ಮುಂದುವರಿಸಲಾಗುತ್ತಿದೆ. ಈಗಿರುವ ಕಾಮಗಾರಿಯ ಪ್ರಕಾರ ವಾಣಿಜ್ಯ ಮತ್ತು ವಾಸದ ಕಟ್ಟಡಗಳಿಗೆ ಮೊದಲು ಯುಜಿಡಿ ಸಂಪರ್ಕವನ್ನು ನಗರಪಾಲಿಕೆ ಕಡ್ಡಾಯಗೊಳಿಸಬೇಕು. ನಂತರ ಕಾಮಗಾರಿ ಮುಂದುವರಿಸಬೇಕು ಎಂದುಒತ್ತಾಯಿಸಿದರು.</p>.<p>ರಸ್ತೆ ಕಿರಿದಾದರೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೂ ಸಮಸ್ಯೆಯಾಗುತ್ತದೆ. ಜನರು ಅಂಗಡಿ, ಮನೆಗಳಿಂದ ಸರಾಗವಾಗಿ ಓಡಾಡಲು ಚರಂಡಿ ಎತ್ತರ ಕನಿಷ್ಠ 3 ಅಥವಾ 4 ಇಂಚು ತಗ್ಗಿಸಬೇಕು. ಈ ರಸ್ತೆಯಲ್ಲಿ ಬರುವ ಮನೆ, ಮಳಿಗೆಗಳಿಗೆ 24X7ನೀರಿನ ಸಂಪರ್ಕ ಕಲ್ಪಿಸದೇಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದು ಅವೈಜ್ಞಾನಿಕ ಎಂದು ದೂರದಿರು.</p>.<p>ಒಕ್ಕೂಟದ ಕೆ.ವಿ.ವಸಂತಕುಮಾರ್, ಮುಖಂಡರಾದ ಎಸ್.ಬಿ.ಅಶೋಕ್ಕುಮಾರ್, ಸತೀಶ್ ಕುಮಾರ್ ಶೆಟ್ಟಿ, ರುದ್ರಪ್ಪ ಮತ್ತಿತರರು ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>