ಶಿವಮೊಗ್ಗ: ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಮುಂದೆಪ್ರತಿಭಟನೆ ನಡೆಸಿದರು.
ಎಂಸಿಟಿಎಸ್ ಚಟುವಟಿಕೆಗಳಿಗೆ ನಿಗದಿಯಾದ ಪ್ರೋತ್ಸಾಹಧನ ಕಳೆದ ಸೆಪ್ಟಂಬರ್ನಿಂದನೀಡಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ.ಒಬ್ಬೊಬ್ಬರಿಗೆ ಸರಾಸರಿ ತಿಂಗಳಿಗೆ ₨ 2,500 ನೀಡಬೇಕು. ಪ್ರತಿಯೊಬ್ಬರಿಗೂ₨37,500 ಅನುದಾನಬಾಕಿ ಇದೆ.ಇದುವರೆಗೂ ₨300ನೀಡಿದ್ದಾರೆ.ಲೆಕ್ಕಹಾಕಲು ವರ್ಷಬೇಕೆ? ಇನ್ನೆಷ್ಟು ಸಮಯಬೇಕುಎಂದುಪ್ರಶ್ನಿಸಿದರು.
ತಕ್ಷಣವೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಗೌರವಧನ ಕಡಿತ ಮಾಡಬಾರದು. ಇಲ್ಲದಿದ್ದರೆ ಕೆಲಸ ಸ್ಥಗಿತಗೊಳಿಸಿ, ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿಪ್ರೇಮಾ, ಸಲಹೆಗಾರ ಮಂಜುನಾಥ ಕುಕ್ಕವಾಡ, ಪ್ರಮುಖರಾದ ಶೀಲಾಬಾಯಿ, ಸುನೀತಾ, ಚಂದ್ರಕಲಾ, ಆಶಾ, ವಸಂತ, ಜ್ಯೋತಿಪ್ರತಿಭಟನೆಯ ನೇತೃತ್ವ ವಹಿಸಿದ್ದರು.