ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವಿರಾಮ ನೀಡಿ ಆಗಾಗ ಕೆಲಹೊತ್ತು ಮುಖ ತೋರಿಸಿ ಹೋಗುತ್ತಿದ್ದ ಮಳೆರಾಯ ಸೋಮವಾರ ಸಂಜೆಯಿಂದ ಆರ್ಭಟ ಆರಂಭಿಸಿದನು.
ಸಾಗರ, ಹೊಸನಗರ, ತುಮರಿ, ಬ್ಯಾಕೋಡು,ಹೊಳೆಹೊನ್ನೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ರಿಪ್ಪನ್ಪೇಟೆಯಲ್ಲಿ ಸಂಜೆಯಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ಕತ್ತಲಾಗುತ್ತಿದ್ದಂತೆಯೇ ಮಳೆ ಬಿರುಸುಗೊಂಡಿತು. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆಯ ಕಾರಣ ಸಂಜೆ ಕೆಲ ಹೊತ್ತು ವಿದ್ಯುತ್ ಕಣ್ಣಾಮುಚ್ಚಾಲೆ ಆಡಿತು. ಜಿಲ್ಲೆಯಲ್ಲಿ ಆಗಸ್ಟ್ 2ರಿಂದ 4ರವರೆಗೆ ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಘೋಷಿಸಿದೆ.