ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಚುಕ್ಕಿ ರೋಗದ ಕ್ಷಿಪ್ರ ಹರಡುವಿಕೆ ಕಳವಳಕಾರಿ

ರೋಗದ ಹತೋಟಿಗೆ ಹಲವು ಶಿಫಾರಸು ಮಾಡಿದ ಸಿಪಿಸಿಆರ್‌ಐ ತಂಡ
Last Updated 19 ಅಕ್ಟೋಬರ್ 2021, 7:05 IST
ಅಕ್ಷರ ಗಾತ್ರ

ಹೊಸನಗರ: ‘ಅಡಿಕೆಗೆ ಎಲೆಚುಕ್ಕಿ ರೋಗ ಹೊಸತೇನಲ್ಲ. ಆದರೆ ಈ ಬಾರಿ ಅದರ ಹರಡುವಿಕೆಯ ವೇಗ ಕಳವಳಕಾರಿಯಾಗಿದೆ’ ಎಂದು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ.

ಕೇರಳದ ಕಾಸರಗೋಡಿನಲ್ಲಿ ಕೇಂದ್ರದ ಸಿಪಿಸಿಆರ್‌ಐನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ.ರವಿ ಭಟ್,ಶಂಕಣ್ಣ ಶ್ಯಾನುಭೋಗ ಅವರ ನೇತೃತ್ವದ ತಂಡ ತಾಲ್ಲೂಕಿನ ನಿಟ್ಟೂರಿನಲ್ಲಿ ಎರಡು ವಾರಗಳ ಹಿಂದೆ ಎಲೆಚುಕ್ಕಿ ರೋಗದ ಉಲ್ಬಣದ ಬಗ್ಗೆ ಅಧ್ಯಯನ ನಡೆಸಿ ಈಚೆಗೆ ಸರ್ಕಾರಕ್ಕೆ ವರದಿ ನೀಡಿದೆ.

2019ರಲ್ಲಿ ಚಿಕ್ಕಮಗಳೂರಿನ ಕಳಸದಲ್ಲೂ ಕಂಡುಬಂದಿತ್ತು ಎಂದು ವರದಿ ನೀಡಿರುವ ತಂಡ ರೋಗ ನಿಯಂತ್ರಣದ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

‘ಈ ಭಾಗದ ಮಣ್ಣಿನಲ್ಲಿ ಮಾತ್ರವಲ್ಲದೆ ಅಡಿಕೆ ಮರಗಳ ಎಲೆಗಳಲ್ಲೂ ಪೊಟ್ಯಾಶ್‌ ಅಂಶದ ಕೊರತೆ ಕಂಡುಬಂದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಅತಿಯಾಗಿರುವುದೂ ಕಾರಣವಾಗಿದೆ. ರೋಗದ ಗುಣಲಕ್ಷಣ ಕಂಡುಬಂದ ಅಡಿಕೆ ಮರಗಳ ಒಣಗಿದಂತೆ ಕಂಡುಬರುವದ ಕೆಳಭಾಗದ ಎರಡರಿಂದ ಮೂರು ಹೆಡೆಗಳನ್ನು ವಿಮುಖಗೊಳಿಸಬೇಕು. ಆ ಹೆಡೆಗಳನ್ನು ಹಾಗೆ ಎಲ್ಲೆಂದರೆಲ್ಲಿ ಬಿಡದೆ ಸುಟ್ಟು ಹಾಕಬೇಕು’ ಎಂದು ತಿಳಿಸಿದೆ.

‘ಹೆಕ್ಸೋಕೋನೋಜಾಲ್(ಶೇ 0.2) 2ಮಿಲಿ ಲೀಟರ್ ನೀರಿಗೆ ಬೆರೆಸಿ ಪ್ರತಿ 30 ದಿನದಿಂದ 40 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಅಥವಾ ಕಾರ್ಭೆಂಡೇಜಿಯಂ ಶೇ 12, ಮ್ಯಾಂಕೋಜಬ್ ಶೇ 63(ಸಾಪ್) 2.5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದು ತಿಳಿಸಿದೆ.

ಗಾಳಿಯಲ್ಲಿ ವೇಗವಾಗಿ ಹರಡುವ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೇವಲ ಒಂದು ತೋಟಕ್ಕೆ ಔಷಧ ಸಿಂಪಡಿಸಿದರೆ ಯಾವುದೇ ಪ್ರಯೋಜನವಿಲ್ಲ. ಸಾಮೂಹಿಕವಾಗಿ ಔಷಧ ಸಿಂಪಡಣೆಗೆ ಒತ್ತು ನೀಡಬೇಕು’ ಎಂದೂ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT