<p><strong>ಹೊಸನಗರ: </strong>‘ಅಡಿಕೆಗೆ ಎಲೆಚುಕ್ಕಿ ರೋಗ ಹೊಸತೇನಲ್ಲ. ಆದರೆ ಈ ಬಾರಿ ಅದರ ಹರಡುವಿಕೆಯ ವೇಗ ಕಳವಳಕಾರಿಯಾಗಿದೆ’ ಎಂದು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ) ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ.</p>.<p>ಕೇರಳದ ಕಾಸರಗೋಡಿನಲ್ಲಿ ಕೇಂದ್ರದ ಸಿಪಿಸಿಆರ್ಐನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ.ರವಿ ಭಟ್,ಶಂಕಣ್ಣ ಶ್ಯಾನುಭೋಗ ಅವರ ನೇತೃತ್ವದ ತಂಡ ತಾಲ್ಲೂಕಿನ ನಿಟ್ಟೂರಿನಲ್ಲಿ ಎರಡು ವಾರಗಳ ಹಿಂದೆ ಎಲೆಚುಕ್ಕಿ ರೋಗದ ಉಲ್ಬಣದ ಬಗ್ಗೆ ಅಧ್ಯಯನ ನಡೆಸಿ ಈಚೆಗೆ ಸರ್ಕಾರಕ್ಕೆ ವರದಿ ನೀಡಿದೆ.</p>.<p>2019ರಲ್ಲಿ ಚಿಕ್ಕಮಗಳೂರಿನ ಕಳಸದಲ್ಲೂ ಕಂಡುಬಂದಿತ್ತು ಎಂದು ವರದಿ ನೀಡಿರುವ ತಂಡ ರೋಗ ನಿಯಂತ್ರಣದ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.</p>.<p>‘ಈ ಭಾಗದ ಮಣ್ಣಿನಲ್ಲಿ ಮಾತ್ರವಲ್ಲದೆ ಅಡಿಕೆ ಮರಗಳ ಎಲೆಗಳಲ್ಲೂ ಪೊಟ್ಯಾಶ್ ಅಂಶದ ಕೊರತೆ ಕಂಡುಬಂದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಅತಿಯಾಗಿರುವುದೂ ಕಾರಣವಾಗಿದೆ. ರೋಗದ ಗುಣಲಕ್ಷಣ ಕಂಡುಬಂದ ಅಡಿಕೆ ಮರಗಳ ಒಣಗಿದಂತೆ ಕಂಡುಬರುವದ ಕೆಳಭಾಗದ ಎರಡರಿಂದ ಮೂರು ಹೆಡೆಗಳನ್ನು ವಿಮುಖಗೊಳಿಸಬೇಕು. ಆ ಹೆಡೆಗಳನ್ನು ಹಾಗೆ ಎಲ್ಲೆಂದರೆಲ್ಲಿ ಬಿಡದೆ ಸುಟ್ಟು ಹಾಕಬೇಕು’ ಎಂದು ತಿಳಿಸಿದೆ.</p>.<p>‘ಹೆಕ್ಸೋಕೋನೋಜಾಲ್(ಶೇ 0.2) 2ಮಿಲಿ ಲೀಟರ್ ನೀರಿಗೆ ಬೆರೆಸಿ ಪ್ರತಿ 30 ದಿನದಿಂದ 40 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಅಥವಾ ಕಾರ್ಭೆಂಡೇಜಿಯಂ ಶೇ 12, ಮ್ಯಾಂಕೋಜಬ್ ಶೇ 63(ಸಾಪ್) 2.5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದು ತಿಳಿಸಿದೆ.</p>.<p>ಗಾಳಿಯಲ್ಲಿ ವೇಗವಾಗಿ ಹರಡುವ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೇವಲ ಒಂದು ತೋಟಕ್ಕೆ ಔಷಧ ಸಿಂಪಡಿಸಿದರೆ ಯಾವುದೇ ಪ್ರಯೋಜನವಿಲ್ಲ. ಸಾಮೂಹಿಕವಾಗಿ ಔಷಧ ಸಿಂಪಡಣೆಗೆ ಒತ್ತು ನೀಡಬೇಕು’ ಎಂದೂ ಅಭಿಪ್ರಾಯಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ: </strong>‘ಅಡಿಕೆಗೆ ಎಲೆಚುಕ್ಕಿ ರೋಗ ಹೊಸತೇನಲ್ಲ. ಆದರೆ ಈ ಬಾರಿ ಅದರ ಹರಡುವಿಕೆಯ ವೇಗ ಕಳವಳಕಾರಿಯಾಗಿದೆ’ ಎಂದು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ) ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ.</p>.<p>ಕೇರಳದ ಕಾಸರಗೋಡಿನಲ್ಲಿ ಕೇಂದ್ರದ ಸಿಪಿಸಿಆರ್ಐನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ.ರವಿ ಭಟ್,ಶಂಕಣ್ಣ ಶ್ಯಾನುಭೋಗ ಅವರ ನೇತೃತ್ವದ ತಂಡ ತಾಲ್ಲೂಕಿನ ನಿಟ್ಟೂರಿನಲ್ಲಿ ಎರಡು ವಾರಗಳ ಹಿಂದೆ ಎಲೆಚುಕ್ಕಿ ರೋಗದ ಉಲ್ಬಣದ ಬಗ್ಗೆ ಅಧ್ಯಯನ ನಡೆಸಿ ಈಚೆಗೆ ಸರ್ಕಾರಕ್ಕೆ ವರದಿ ನೀಡಿದೆ.</p>.<p>2019ರಲ್ಲಿ ಚಿಕ್ಕಮಗಳೂರಿನ ಕಳಸದಲ್ಲೂ ಕಂಡುಬಂದಿತ್ತು ಎಂದು ವರದಿ ನೀಡಿರುವ ತಂಡ ರೋಗ ನಿಯಂತ್ರಣದ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.</p>.<p>‘ಈ ಭಾಗದ ಮಣ್ಣಿನಲ್ಲಿ ಮಾತ್ರವಲ್ಲದೆ ಅಡಿಕೆ ಮರಗಳ ಎಲೆಗಳಲ್ಲೂ ಪೊಟ್ಯಾಶ್ ಅಂಶದ ಕೊರತೆ ಕಂಡುಬಂದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಅತಿಯಾಗಿರುವುದೂ ಕಾರಣವಾಗಿದೆ. ರೋಗದ ಗುಣಲಕ್ಷಣ ಕಂಡುಬಂದ ಅಡಿಕೆ ಮರಗಳ ಒಣಗಿದಂತೆ ಕಂಡುಬರುವದ ಕೆಳಭಾಗದ ಎರಡರಿಂದ ಮೂರು ಹೆಡೆಗಳನ್ನು ವಿಮುಖಗೊಳಿಸಬೇಕು. ಆ ಹೆಡೆಗಳನ್ನು ಹಾಗೆ ಎಲ್ಲೆಂದರೆಲ್ಲಿ ಬಿಡದೆ ಸುಟ್ಟು ಹಾಕಬೇಕು’ ಎಂದು ತಿಳಿಸಿದೆ.</p>.<p>‘ಹೆಕ್ಸೋಕೋನೋಜಾಲ್(ಶೇ 0.2) 2ಮಿಲಿ ಲೀಟರ್ ನೀರಿಗೆ ಬೆರೆಸಿ ಪ್ರತಿ 30 ದಿನದಿಂದ 40 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಅಥವಾ ಕಾರ್ಭೆಂಡೇಜಿಯಂ ಶೇ 12, ಮ್ಯಾಂಕೋಜಬ್ ಶೇ 63(ಸಾಪ್) 2.5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದು ತಿಳಿಸಿದೆ.</p>.<p>ಗಾಳಿಯಲ್ಲಿ ವೇಗವಾಗಿ ಹರಡುವ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೇವಲ ಒಂದು ತೋಟಕ್ಕೆ ಔಷಧ ಸಿಂಪಡಿಸಿದರೆ ಯಾವುದೇ ಪ್ರಯೋಜನವಿಲ್ಲ. ಸಾಮೂಹಿಕವಾಗಿ ಔಷಧ ಸಿಂಪಡಣೆಗೆ ಒತ್ತು ನೀಡಬೇಕು’ ಎಂದೂ ಅಭಿಪ್ರಾಯಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>