<p><strong>ಶಿವಮೊಗ್ಗ</strong>: ಚಿತ್ರದುರ್ಗದ ರೇಣಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ಜೊತೆ ಸಹ ಆರೋಪಿಗಳಾಗಿರುವ ಜಗದೀಶ್ ಹಾಗೂ ಲಕ್ಷ್ಮಣ್ನನ್ನು ಗುರುವಾರ ಪರಪರಪನ ಅಗ್ರಹಾರ ಕಾರಾಗೃಹದಿಂದ ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು.</p>.<p>ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಪೊಲೀಸರ ಬೆಂಗಾವಲಿನಲ್ಲಿ ಆರೋಪಿಗಳನ್ನು ಕರೆತರಲಾಯಿತು.</p>.<p>‘ಕೇಂದ್ರ ಕಾರಾಗೃಹದ ಕಾವೇರಿ ವಿಭಾಗದಲ್ಲಿ ಇಬ್ಬರೂ ವಿಚಾರಣಾಧೀನ ಕೈದಿಗಳನ್ನು ಉಳಿದ ಸಾಮಾನ್ಯ ಕೈದಿಗಳಂತೆಯೇ ಭದ್ರತೆಯಲ್ಲಿ ಇಡಲಾಗಿದೆ. ಏಳು ದಿನಗಳ ಕಾಲ ಅವರನ್ನು ಪ್ರತ್ಯೇಕವಾಗಿ (ಕ್ವಾರಂಟೈನ್) ಇರಿಸಿ ನಿಗಾ ವಹಿಸಬೇಕಿದೆ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ತಿಳಿಸಿದರು.</p>.<p>ಧಾರವಾಡ/ಬೆಳಗಾವಿ ವರದಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಧನರಾಜ್ಗೆ ಗುರುವಾರ ಮಧ್ಯಾಹ್ನ 12.45ಕ್ಕೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕರೆತಂದರು. </p>.<p>ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೂಶ್ಗೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ ಪೊಲೀಸರು ಕರೆ ತಂದರು. ಇಬ್ಬರ ಬಳಿಯಿದ್ದ ಚೀಲ, ಪರಿಕರಗಳನ್ನು ಪರಿಶೀಲಿಸಿದರು. ಔಷಧಿ ಹೊರತುಪಡಿಸಿ, ಉಳಿದ ಸಾಮಗ್ರಿಗಳನ್ನು ಒಯ್ಯಲು ಅವಕಾಶ ನೀಡಲಿಲ್ಲ.</p>.<p><strong>ಆರೋಗ್ಯದಲ್ಲಿ ವ್ಯತ್ಯಾಸ: ಆರೋಪಿಗಳ ಸ್ಥಳಾಂತರ ವಿಳಂಬ<br></strong></p><p><strong>ಮೈಸೂರು ವರದಿ</strong>: ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣಕ್ಕೆ, ರೇಣುಕಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಕರೆತರಲಿಲ್ಲ. ಶುಕ್ರವಾರ ಬೆಳಿಗ್ಗೆ ಅವರನ್ನು ಕರೆತರುವ ಸಾಧ್ಯತೆ ಇದೆ.</p>.<p>ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆರೋಪಿ ದರ್ಶನ್ಗೆ ವಿಶೇಷ ಆತಿಥ್ಯ ಪ್ರಕರಣದ ಬಳಿಕ ಪ್ರಕರಣದ ಆರೋಪಿಗಳಾದ ನಂದೀಶ್, ರಾಘವೇಂದ್ರ, ಪವನ್ ಎಂಬುವರನ್ನು ಅಲ್ಲಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಚಿತ್ರದುರ್ಗದ ರೇಣಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ಜೊತೆ ಸಹ ಆರೋಪಿಗಳಾಗಿರುವ ಜಗದೀಶ್ ಹಾಗೂ ಲಕ್ಷ್ಮಣ್ನನ್ನು ಗುರುವಾರ ಪರಪರಪನ ಅಗ್ರಹಾರ ಕಾರಾಗೃಹದಿಂದ ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು.</p>.<p>ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಪೊಲೀಸರ ಬೆಂಗಾವಲಿನಲ್ಲಿ ಆರೋಪಿಗಳನ್ನು ಕರೆತರಲಾಯಿತು.</p>.<p>‘ಕೇಂದ್ರ ಕಾರಾಗೃಹದ ಕಾವೇರಿ ವಿಭಾಗದಲ್ಲಿ ಇಬ್ಬರೂ ವಿಚಾರಣಾಧೀನ ಕೈದಿಗಳನ್ನು ಉಳಿದ ಸಾಮಾನ್ಯ ಕೈದಿಗಳಂತೆಯೇ ಭದ್ರತೆಯಲ್ಲಿ ಇಡಲಾಗಿದೆ. ಏಳು ದಿನಗಳ ಕಾಲ ಅವರನ್ನು ಪ್ರತ್ಯೇಕವಾಗಿ (ಕ್ವಾರಂಟೈನ್) ಇರಿಸಿ ನಿಗಾ ವಹಿಸಬೇಕಿದೆ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ತಿಳಿಸಿದರು.</p>.<p>ಧಾರವಾಡ/ಬೆಳಗಾವಿ ವರದಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಧನರಾಜ್ಗೆ ಗುರುವಾರ ಮಧ್ಯಾಹ್ನ 12.45ಕ್ಕೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕರೆತಂದರು. </p>.<p>ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೂಶ್ಗೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ ಪೊಲೀಸರು ಕರೆ ತಂದರು. ಇಬ್ಬರ ಬಳಿಯಿದ್ದ ಚೀಲ, ಪರಿಕರಗಳನ್ನು ಪರಿಶೀಲಿಸಿದರು. ಔಷಧಿ ಹೊರತುಪಡಿಸಿ, ಉಳಿದ ಸಾಮಗ್ರಿಗಳನ್ನು ಒಯ್ಯಲು ಅವಕಾಶ ನೀಡಲಿಲ್ಲ.</p>.<p><strong>ಆರೋಗ್ಯದಲ್ಲಿ ವ್ಯತ್ಯಾಸ: ಆರೋಪಿಗಳ ಸ್ಥಳಾಂತರ ವಿಳಂಬ<br></strong></p><p><strong>ಮೈಸೂರು ವರದಿ</strong>: ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣಕ್ಕೆ, ರೇಣುಕಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಕರೆತರಲಿಲ್ಲ. ಶುಕ್ರವಾರ ಬೆಳಿಗ್ಗೆ ಅವರನ್ನು ಕರೆತರುವ ಸಾಧ್ಯತೆ ಇದೆ.</p>.<p>ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆರೋಪಿ ದರ್ಶನ್ಗೆ ವಿಶೇಷ ಆತಿಥ್ಯ ಪ್ರಕರಣದ ಬಳಿಕ ಪ್ರಕರಣದ ಆರೋಪಿಗಳಾದ ನಂದೀಶ್, ರಾಘವೇಂದ್ರ, ಪವನ್ ಎಂಬುವರನ್ನು ಅಲ್ಲಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>