‘ಇಲ್ಲಿನ ಎಲ್ಬಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬರಹಗಾರರಾಗಿಯೂ ನಾಡಿನಲ್ಲಿ ಹೆಸರು ಮಾಡಿರುವ ದೊಡ್ಡ ಪರಂಪರೆಯೇ ಇದೆ. ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಜಿ.ಕೆ. ಗೋವಿಂದರಾವ್, ಟಿ.ಪಿ. ಅಶೋಕ್, ಡಾ. ಗುರುರಾವ್ ಬಾಪಟ್ ಹೀಗೆ ಹಲವರನ್ನು ಹೆಸರಿಸಬಹುದು. ರೇಣುಕಪ್ಪ ಗೌಡರು ಅಧ್ಯಾಪನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಬಹುಶಃ ಬರವಣಿಗೆಯತ್ತ ಆಸಕ್ತಿ ಹೊರಳಿಸಲಿಲ್ಲ’ ಎಂದು ಹೇಳಿದರು.