<p><strong>ಶಿವಮೊಗ್ಗ:</strong> ಮಳೆ ಆರಂಭಕ್ಕೂ ಮೊದಲು ಪಾಲಿಕೆ ವ್ಯಾಪ್ತಿಯ ಎಲ್ಲ ರಾಜಕಾಲುವೆಗಳ ಹೂಳುತೆಗೆಸಬೇಕು. ಮಳೆಗಾಲದಲ್ಲಿ ಆಗುವ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.</p>.<p>ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ರಾಜಕಾಲುವೆಗಳಲ್ಲಿ ಹೂಳುತುಂಬಿದೆ.ಮಳೆ ಬಂದರೆಕಾಲುವೆ ತುಂಬಿಬಡಾವಣೆಗಳಲ್ಲಿನಮನೆಗಳಿಗೆ ಕೊಳಚೆ ನೀರು ನುಗ್ಗುತ್ತದೆ. ಪ್ರತಿ ವರ್ಷವೂ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.ಪಾಲಿಕೆ ಆಯುಕ್ತರು ರಾಜಕಾಲುವೆಗಳಲ್ಲಿ ಇರುವ ಹೂಳುತೆಗೆಸಲು ತಕ್ಷಣಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<p>ಆಗಸ್ಟ್ನಲ್ಲಿ ಬಂದ ನೆರೆ ಹಾವಳಿಯಿಂದ ಪಾಲಿಕೆ ವ್ಯಾಪ್ತಿಯ ಸಾವಿರಾರು ಜನರು ನಿರಾಶ್ರಿತರಾಗಿ ಮನೆ ಕಳೆದುಕೊಂಡಿದ್ದರು.ಕೋಟ್ಯಂತರ ರೂಪಾಯಿ ನಷ್ಟವಾಗಿವೆ. ಹಲವುವರ್ಷಗಳಿಂದ ಹೂಳು ತುಂಬಿದೆ. ಮಳೆ ಬಂದಸಮಯದಲ್ಲಿನೀರು ಸರಾಗವಾಗಿ ಹರಿಯುತ್ತಿಲ್ಲ. ಇದಕ್ಕೆ ಪಾಲಿಕೆಯ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದರು.</p>.<p>ಎಚ್1ಎನ್1, ಕಾಲರಾ, ಮಲೆರಿಯಾ, ಡೆಂಗೆ ರೋಗಗಳಿಂದ ನರಳುತ್ತಿದ್ದಾರೆ. ಬಾಪೂಜಿ ನಗರ, ಭಾರತಿಕಾಲೊನಿ, ಇಮಾಂ ಬಡಾವಣೆ, ಎಚ್.ಸಿದ್ದಯ್ಯ ರಸ್ತೆ ಸೇರಿದಂತೆ ಹಲವುಬಡಾವಣೆಗಳು ಪ್ರತಿ ವರ್ಷವೂ ಕೊಳಚೆ ನೀರಿನಲ್ಲಿ ಮುಳುಗುತ್ತವೆ.ಹಾಗಾಗಿ, ತಕ್ಷಣವೇಅಧಿಕಾರಿಗಳ ಸಭೆ ಕರೆಯಬೇಕು.ಪ್ರತಿಯೊಂದು ರಾಜಕಾಲುವೆಗಳ ಹೂಳು ತೆಗೆಸಬೇಕು ಎಂದು ಆಗ್ರಹಿಸಿದರು.</p>.<p>ಸಂಘಟನೆಯ ಪ್ರಮುಖರಾದ ಅಶೋಕ್ ಯಾದವ್, ಸುಬ್ರಮಣ್ಯ, ಡಾ.ಬಿ.ಎಂ.ಚಿಕ್ಕಸ್ವಾಮಿ, ವೆಂಕಟನಾರಾಯಣ್, ಸುಬ್ಬಣ್ಣಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಮಳೆ ಆರಂಭಕ್ಕೂ ಮೊದಲು ಪಾಲಿಕೆ ವ್ಯಾಪ್ತಿಯ ಎಲ್ಲ ರಾಜಕಾಲುವೆಗಳ ಹೂಳುತೆಗೆಸಬೇಕು. ಮಳೆಗಾಲದಲ್ಲಿ ಆಗುವ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.</p>.<p>ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ರಾಜಕಾಲುವೆಗಳಲ್ಲಿ ಹೂಳುತುಂಬಿದೆ.ಮಳೆ ಬಂದರೆಕಾಲುವೆ ತುಂಬಿಬಡಾವಣೆಗಳಲ್ಲಿನಮನೆಗಳಿಗೆ ಕೊಳಚೆ ನೀರು ನುಗ್ಗುತ್ತದೆ. ಪ್ರತಿ ವರ್ಷವೂ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.ಪಾಲಿಕೆ ಆಯುಕ್ತರು ರಾಜಕಾಲುವೆಗಳಲ್ಲಿ ಇರುವ ಹೂಳುತೆಗೆಸಲು ತಕ್ಷಣಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<p>ಆಗಸ್ಟ್ನಲ್ಲಿ ಬಂದ ನೆರೆ ಹಾವಳಿಯಿಂದ ಪಾಲಿಕೆ ವ್ಯಾಪ್ತಿಯ ಸಾವಿರಾರು ಜನರು ನಿರಾಶ್ರಿತರಾಗಿ ಮನೆ ಕಳೆದುಕೊಂಡಿದ್ದರು.ಕೋಟ್ಯಂತರ ರೂಪಾಯಿ ನಷ್ಟವಾಗಿವೆ. ಹಲವುವರ್ಷಗಳಿಂದ ಹೂಳು ತುಂಬಿದೆ. ಮಳೆ ಬಂದಸಮಯದಲ್ಲಿನೀರು ಸರಾಗವಾಗಿ ಹರಿಯುತ್ತಿಲ್ಲ. ಇದಕ್ಕೆ ಪಾಲಿಕೆಯ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದರು.</p>.<p>ಎಚ್1ಎನ್1, ಕಾಲರಾ, ಮಲೆರಿಯಾ, ಡೆಂಗೆ ರೋಗಗಳಿಂದ ನರಳುತ್ತಿದ್ದಾರೆ. ಬಾಪೂಜಿ ನಗರ, ಭಾರತಿಕಾಲೊನಿ, ಇಮಾಂ ಬಡಾವಣೆ, ಎಚ್.ಸಿದ್ದಯ್ಯ ರಸ್ತೆ ಸೇರಿದಂತೆ ಹಲವುಬಡಾವಣೆಗಳು ಪ್ರತಿ ವರ್ಷವೂ ಕೊಳಚೆ ನೀರಿನಲ್ಲಿ ಮುಳುಗುತ್ತವೆ.ಹಾಗಾಗಿ, ತಕ್ಷಣವೇಅಧಿಕಾರಿಗಳ ಸಭೆ ಕರೆಯಬೇಕು.ಪ್ರತಿಯೊಂದು ರಾಜಕಾಲುವೆಗಳ ಹೂಳು ತೆಗೆಸಬೇಕು ಎಂದು ಆಗ್ರಹಿಸಿದರು.</p>.<p>ಸಂಘಟನೆಯ ಪ್ರಮುಖರಾದ ಅಶೋಕ್ ಯಾದವ್, ಸುಬ್ರಮಣ್ಯ, ಡಾ.ಬಿ.ಎಂ.ಚಿಕ್ಕಸ್ವಾಮಿ, ವೆಂಕಟನಾರಾಯಣ್, ಸುಬ್ಬಣ್ಣಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>