ನದಿ ನೀರಿನ ಪ್ರವಾಹ ಇದೇ ರೀತಿ ಹೆಚ್ಚಾದರೆ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಅತಿ ಶೀಘ್ರದಲ್ಲೇ ಅಣೆಕಟ್ಟೆಯ ರೇಡಿಯಲ್ ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನದಿ ತೀರಗಳಾದ ಯಡ್ಡಳ್ಳಿ, ಕಾರ್ಗಲ್ ಮರಳುಕೋರೆ, ಚೈನಾಗೇಟ್, ಜಾಲಿಗದ್ದೆ, ಗಿಳಾಲಗುಂಡಿ, ರಿಸರ್ವ್ ಕ್ಯಾಂಪ್, ಸೀತಾಕಟ್ಟೆ ಸೇರಿ ಶರಾವತಿ ಟೈಲ್ ರೇಸ್ ನಿವಾಸಿಗಳಿಗೆ ಮುಂಚಿತವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.