ಟ್ಯಾಂಕ್ಮೊಹಲ್ಲಾದ ಮಹಮದ್ ಜೈದಾನ್ (22) ಕೊಲೆಯಾದ ಯುವಕ. ವಾರದ ಹಿಂದಷ್ಟೆ ಮನೆಯನ್ನು ವಾದಿ ಎ ಹುದಾ ನಗರಕ್ಕೆ ಸ್ಥಳಾಂತರಿಸಿದ್ದ. ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳು ಪತ್ತೆಯಾಗಿಲ್ಲ. ಜೈದಾನ್ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಹೊಡೆದಾಟದ ಎರಡು ಪ್ರಕರಣಗಳು ದಾಖಲಾಗಿದ್ದವು.