<p><strong>ಸಾಗರ: </strong>ಇಲ್ಲಿನ ಅಂಚೆ ಇಲಾಖೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಎನ್ ಪಿಎಸ್ ಮತ್ತು ಯುಪಿಎಸ್ ಪಿಂಚಣಿ ಯೋಜನೆಗಳನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಆರ್ ಎಂಎಸ್ ಮತ್ತು ಎಂಎಂಎಸ್ ಕಚೇರಿ ಉದ್ಯೋಗಿಗಳನ್ನು ವಿಲೀನಗೊಳಿಸುವುದನ್ನು ನಿಲ್ಲಿಸಬೇಕು, 2023 ನೇ ಸಾಲಿನ ಏಪ್ರಿಲ್ 26 ರ ಆದೇಶವನ್ನು ರದ್ದುಗೊಳಿಸಿ ಪಿ3 ಮತ್ತು ಎನ್ಎಫ್ ಪಿಇಗೆ ಮಾನ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>ಅಂಚೆ ಕಚೇರಿ ಕಾಯ್ದೆ 2023 ನ್ನು ರದ್ದುಗೊಳಿಸಬೇಕು, ಜಿಡಿಎಸ್ ನ ಕ್ಯಾಶುವಲ್ ಕಾರ್ಮಿಕರು ಮತ್ತು ಅರೆಕಾಲಿಕ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲಾ ಉದ್ಯೋಗಿಗಳಿಗೆ ಅವರ ಸಂಪೂರ್ಣ ಸೇವೆಯಲ್ಲಿ ಐದು ಭಡ್ತಿಗಳನ್ನು ನೀಡಬೇಕು, ಪರಿಹಾರದ ಮೇಲಿನ ಶೇ.5 ಭಡ್ತಿ ಮಿತಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಕೋವಿಡ್ ಸಂದರ್ಭದಲ್ಲಿ ಮುಚ್ಚಿರುವ ಅಂಚೆ ಕಚೇರಿಗಳನ್ನು ಮತ್ತೆ ತೆರೆಯಬೇಕು, 8 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 01-01-2026ಕ್ಕೆ ಅನ್ವಯವಾಗುವಂತೆ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>ಪ್ರಮುಖರಾದ ಪುಂಡಲೀಕ ಚೌಧರಿ, ಸುಪ್ರಿತಾ, ಅವಿನಾಶ್, ಮೋಹಿನಿ, ಸುಬ್ಬು, ನಂದನ್, ಸೂರಜ್ ಬಾಂಬುರೆ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ಇಲ್ಲಿನ ಅಂಚೆ ಇಲಾಖೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಎನ್ ಪಿಎಸ್ ಮತ್ತು ಯುಪಿಎಸ್ ಪಿಂಚಣಿ ಯೋಜನೆಗಳನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಆರ್ ಎಂಎಸ್ ಮತ್ತು ಎಂಎಂಎಸ್ ಕಚೇರಿ ಉದ್ಯೋಗಿಗಳನ್ನು ವಿಲೀನಗೊಳಿಸುವುದನ್ನು ನಿಲ್ಲಿಸಬೇಕು, 2023 ನೇ ಸಾಲಿನ ಏಪ್ರಿಲ್ 26 ರ ಆದೇಶವನ್ನು ರದ್ದುಗೊಳಿಸಿ ಪಿ3 ಮತ್ತು ಎನ್ಎಫ್ ಪಿಇಗೆ ಮಾನ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>ಅಂಚೆ ಕಚೇರಿ ಕಾಯ್ದೆ 2023 ನ್ನು ರದ್ದುಗೊಳಿಸಬೇಕು, ಜಿಡಿಎಸ್ ನ ಕ್ಯಾಶುವಲ್ ಕಾರ್ಮಿಕರು ಮತ್ತು ಅರೆಕಾಲಿಕ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲಾ ಉದ್ಯೋಗಿಗಳಿಗೆ ಅವರ ಸಂಪೂರ್ಣ ಸೇವೆಯಲ್ಲಿ ಐದು ಭಡ್ತಿಗಳನ್ನು ನೀಡಬೇಕು, ಪರಿಹಾರದ ಮೇಲಿನ ಶೇ.5 ಭಡ್ತಿ ಮಿತಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಕೋವಿಡ್ ಸಂದರ್ಭದಲ್ಲಿ ಮುಚ್ಚಿರುವ ಅಂಚೆ ಕಚೇರಿಗಳನ್ನು ಮತ್ತೆ ತೆರೆಯಬೇಕು, 8 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 01-01-2026ಕ್ಕೆ ಅನ್ವಯವಾಗುವಂತೆ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>ಪ್ರಮುಖರಾದ ಪುಂಡಲೀಕ ಚೌಧರಿ, ಸುಪ್ರಿತಾ, ಅವಿನಾಶ್, ಮೋಹಿನಿ, ಸುಬ್ಬು, ನಂದನ್, ಸೂರಜ್ ಬಾಂಬುರೆ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>