ಅವರ ಜನ್ಮಸ್ಥಳ ಅಭಿವೃದ್ಧಿ ಪಡಿಸುವ ಬೇಡಿಕೆಯೊಂದಿಗೆ ಜಾಥಾ ನಡೆಯುತ್ತಿದೆ.ಜಾಥಾ ಶಿವಮೊಗ್ಗ, ಭದ್ರಾವತಿ, ತರೀಕರೆ, ಅರಸೀಕೆರೆ, ಗುಬ್ಬಿ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧಿ ಭವನ ತಲುಪಲಿದೆ. ಜನ್ಮಶತಾಬ್ದಿ ಜಾಥಾ ಸಮಿತಿ ಸಂಚಾಲಕರಾದ ಎನ್.ಶಿವಾನಂದ ಕುಗ್ವೆ, ಎನ್.ಡಿ. ವಸಂತ್ ಕುಮಾರ್ ನೇತೃತ್ವ ವಹಿಸಿದ್ದಾರೆ.