ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೋಡು ಸ್ಫೋಟ ಮತ್ತು ಭೂ ಕಂಪನ: ಬಗೆಹರಿಯದ ಗೊಂದಲ

Last Updated 22 ಜನವರಿ 2021, 11:25 IST
ಅಕ್ಷರ ಗಾತ್ರ

ಶಿವಮೊಗ್ಗ: ಹುಣಸೋಡು ಕ್ವಾರಿ ಬಳಿ ನಡೆದ ಸ್ಫೋಟದಲ್ಲಿ ಅಕ್ಕಪಕ್ಕದ ಕೆಲವು ಮನೆಗಳು ಬಿರುಕು ಬಿಟ್ಟಿದ್ದರೂ, ದೊಡ್ಡ ಪ್ರಮಾಣದ ಅನಾಹುತ ನಡೆದಿಲ್ಲ. ಸ್ಫೋಟದ ಮಗ್ಗುಲಲ್ಲೇ ಇರುವ ಮನೆಯ ಹೆಂಚುಗಳು ಕೆಳಗೆ ಬಿದ್ದಿಲ್ಲ. ಕಂದಕವೂ ನಿರ್ಮಾಣವಾಗಿಲ್ಲ.

ಸ್ಥಳೀಯರ ಮಾಹಿತಿ ಪ್ರಕಾರ ಸ್ಫೋಟವಾದಾಗ ಲಾರಿ ಮೇಲಕ್ಕೆ ಚಿಮ್ಮಿ ಕೆಳಗೆ ಬಿದ್ದಿದೆ. ಭಾರಿ ಶಬ್ದ, ಬೆಳಕು, ದೂಳು ಆವರಿಸಿದೆ. ಯಾವ ಮನೆಗಳೂ ದೊಡ್ಡಮಟ್ಟದ ಹಾನಿಯಾಗಿಲ್ಲ.ಲ್ಲಿನ ವಿದ್ಯುತ್ ಕಂಬಗಳು ಧರೆಗೆ ಉರುಳಿಲ್ಲ. ಸ್ಫೋಟದ ಅಕ್ಕಪಕ್ಕದಲ್ಲಿದ್ದ ವಾಹನಗಳು, ಕ್ರಷರ್ ಯಂತ್ರಗಳು, ಅವುಗಳಿಗೆ ಹಾಕಿರುವ ತಡೆಗೋಡೆಗಲೂ ಸುರಕ್ಷಿತವಾಗಿವೆ. ಆದರೆ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಅಲ್ಲಿನ ನಿವಾಸಿ ಸೋಮ್ಲಾನಾಯ್ಕ.

‘ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಿರುವ ಶಬ್ದ, ನೂರಾರು ಮನೆಗಳ ಕಿಟಕಿ ಗಾಜು, ಗೋಡೆಗಳು, ಆರ್‌ಸಿಸಿ ಕಳಚಿರುವುದು ಸ್ಫೋಟದಿಂದ ಆಗಿರಲು ಸಾಧ್ಯವಿಲ್ಲ. ತಜ್ಞರು ವರದಿ ನೀಡಿದ ಬಳಿಕ ವಾಸ್ತವಾಂಶ ತಿಳಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT