<p>ಸೊರಬ: ಜಗತ್ತಿನಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದ್ದು, ತನ್ನ ವಾತ್ಸಲ್ಯದಿಂದ ಎಲ್ಲರನ್ನೂ ಗೆಲ್ಲುವ ಹೆಣ್ಣನ್ನು ಪೂಜಿಸುವ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಅವಳಿಗೆ ಸಲ್ಲಿಸುವ ಗೌರವ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಮುರುಘಾ ಮಠದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ 'ವಿಶ್ವ ಮಹಿಳಾ ದಿನಾಚರಣೆ 'ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅವರು ಮಾತನಾಡಿದರು. ಹೆಣ್ಣು ಸಂಸ್ಕಾರದ ಪ್ರತೀಕವಾಗಿದ್ದು, ಎಲ್ಲವನ್ನೂ ಪೊರೆಯುವ ಅಗಾಧ ಶಕ್ತಿಯಾಗಿದ್ದಾಳೆ. ಈ ನಾಡನ್ನು ಸಂಸ್ಕಾರಯುತ ನಾಡನ್ನಾಗಿ ಕಟ್ಟುವ ಶಕ್ತಿ ಮಹಿಳೆಗಿದೆ ಎಂದ ಅವರು, ಕನ್ನಡ ನಾಡನ್ನಾಳಿದ ಕೆಳದಿ ಚೆನ್ನಮ್ಮ,ಬೆಳವಡಿ ಮಲ್ಲಮ್ಮ,ರಾಣಿ ಅಬ್ಬಕ್ಕರು ಸ್ವಾತಂತ್ರ್ಯ ತರುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.</p>.<p>ಪುರುಷರಿಗೆ ಸಮಾನವಾಗಿ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಮರಣೀಯ ಸಾಧನೆ ಮಾಡಿದ್ದಾಳೆ. ಸದೃಢ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಎಲ್ಲಿ ಮಹಿಳೆಯರನ್ನು ಗೌರವಿಸುತ್ತೇವೇಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೆಣ್ಣು ಸುಖ ಶಾಂತಿ ನೆಮ್ಮದಿಯಿಂದ ಇದ್ದರೆ ಅ ಮನೆ ಶಾಂತಿಯ ಧಾಮವಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.</p>.<p>ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಬವಿದ್ಯಾ ಚೇತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಸೌಭಾಗ್ಯ,ಪಿಎಸ್ಐ ನಾಗರಾಜ್,ವಿಜಯ್ ಕುಮಾರ್ ದಟ್ಟೇರ್, ರಾಜು ಹಿರಿಯಾವಲಿ, ಧರ್ಮಸ್ಥಳ ಸಂಘ ಯೋಜನಾ ಧಿಕಾರಿ ಸುಬ್ರಾಯ್ ನಾಯ್ಕ್, ಮಂಜುನಾಥ್, ಸುಪ್ರಿಯಾ,ಪವಿತ್ರಾ ರಾಯ್ಕರ್, ಲಕ್ಷ್ಮಿ ಮುರಳೀಧರ,ಉಷಾ ಎಂ.ಬಿ,ಜೋತಿರ್ಮಾಲ.ಚರಿತಾ ಕಾರ್ತಿಕ್,ಪಾಣಿ ರಾಜಪ್ಪ , ರೂಪದರ್ಶಿನಿ, ಮಹೇಶ್ ಖಾರ್ವಿ, ಶಿಕ್ಷಕರಾದ ಸದಾನಂದ, ಸಂಪತ್ ಕುಮಾರ್ , ಉಮೇಶ್ ಭದ್ರಾಪುರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೊರಬ: ಜಗತ್ತಿನಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದ್ದು, ತನ್ನ ವಾತ್ಸಲ್ಯದಿಂದ ಎಲ್ಲರನ್ನೂ ಗೆಲ್ಲುವ ಹೆಣ್ಣನ್ನು ಪೂಜಿಸುವ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಅವಳಿಗೆ ಸಲ್ಲಿಸುವ ಗೌರವ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಮುರುಘಾ ಮಠದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ 'ವಿಶ್ವ ಮಹಿಳಾ ದಿನಾಚರಣೆ 'ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅವರು ಮಾತನಾಡಿದರು. ಹೆಣ್ಣು ಸಂಸ್ಕಾರದ ಪ್ರತೀಕವಾಗಿದ್ದು, ಎಲ್ಲವನ್ನೂ ಪೊರೆಯುವ ಅಗಾಧ ಶಕ್ತಿಯಾಗಿದ್ದಾಳೆ. ಈ ನಾಡನ್ನು ಸಂಸ್ಕಾರಯುತ ನಾಡನ್ನಾಗಿ ಕಟ್ಟುವ ಶಕ್ತಿ ಮಹಿಳೆಗಿದೆ ಎಂದ ಅವರು, ಕನ್ನಡ ನಾಡನ್ನಾಳಿದ ಕೆಳದಿ ಚೆನ್ನಮ್ಮ,ಬೆಳವಡಿ ಮಲ್ಲಮ್ಮ,ರಾಣಿ ಅಬ್ಬಕ್ಕರು ಸ್ವಾತಂತ್ರ್ಯ ತರುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.</p>.<p>ಪುರುಷರಿಗೆ ಸಮಾನವಾಗಿ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಮರಣೀಯ ಸಾಧನೆ ಮಾಡಿದ್ದಾಳೆ. ಸದೃಢ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಎಲ್ಲಿ ಮಹಿಳೆಯರನ್ನು ಗೌರವಿಸುತ್ತೇವೇಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೆಣ್ಣು ಸುಖ ಶಾಂತಿ ನೆಮ್ಮದಿಯಿಂದ ಇದ್ದರೆ ಅ ಮನೆ ಶಾಂತಿಯ ಧಾಮವಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.</p>.<p>ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಬವಿದ್ಯಾ ಚೇತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಸೌಭಾಗ್ಯ,ಪಿಎಸ್ಐ ನಾಗರಾಜ್,ವಿಜಯ್ ಕುಮಾರ್ ದಟ್ಟೇರ್, ರಾಜು ಹಿರಿಯಾವಲಿ, ಧರ್ಮಸ್ಥಳ ಸಂಘ ಯೋಜನಾ ಧಿಕಾರಿ ಸುಬ್ರಾಯ್ ನಾಯ್ಕ್, ಮಂಜುನಾಥ್, ಸುಪ್ರಿಯಾ,ಪವಿತ್ರಾ ರಾಯ್ಕರ್, ಲಕ್ಷ್ಮಿ ಮುರಳೀಧರ,ಉಷಾ ಎಂ.ಬಿ,ಜೋತಿರ್ಮಾಲ.ಚರಿತಾ ಕಾರ್ತಿಕ್,ಪಾಣಿ ರಾಜಪ್ಪ , ರೂಪದರ್ಶಿನಿ, ಮಹೇಶ್ ಖಾರ್ವಿ, ಶಿಕ್ಷಕರಾದ ಸದಾನಂದ, ಸಂಪತ್ ಕುಮಾರ್ , ಉಮೇಶ್ ಭದ್ರಾಪುರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>