ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ಕರ್ ಹೊಡೆಯಲು ಯತ್ನಿಸಿದ ವಿದ್ಯಾರ್ಥಿ; ಹುಡುಕಿ ಪರೀಕ್ಷೆ ಬರೆಯಿಸಿದ ಶಿಕ್ಷಕರು

Last Updated 23 ಜುಲೈ 2021, 5:49 IST
ಅಕ್ಷರ ಗಾತ್ರ

ಆನವಟ್ಟಿ: ಸಮೀಪದ ಜಡೆ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಹೇಶ್ ಎಚ್. ಕುಂಟು ನೆಪ ಹೇಳಿ ಪರೀಕ್ಷೆಯಿಂದ ಗೈರಾಗುತ್ತಿದ್ದ. ಸುರಿಯುವ ಮಳೆಯಲ್ಲೇ ಶಿಕ್ಷಕರು ಆತನನ್ನು ಹುಡುಕಿ ಕರೆತಂದರು.

ಪರೀಕ್ಷಾ ಭಯದಿಂದಾಗಿ ತನ್ನ ಆರೋಗ್ಯ ಸರಿ ಇಲ್ಲ ಎಂದು ಕುಂಟು ನೆಪ ಹೇಳಿ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದ. ಜಡೆ ಆಸ್ಪತ್ರೆಗೆ ಹೋಗುವುದಾಗಿ, ನಂತರ ಆನವಟ್ಟಿ ಆಸ್ಪತ್ರೆ ಹೋಗುತ್ತೇನೆ ಎಂದು ತಿಳಿಸಿದ್ದ. ಬಳಿಕ ಪರೀಕ್ಷೆಗೆ ಬಾರದೆ ಅಲೆದಾಡುತ್ತಿದ್ದನು.

ವಿಷಯ ತಿಳಿದ ಶಿಕ್ಷಕರಾದ ಶಂಕರ ಗೌಡ ಹಾಗೂ ಮನೋಜ್ ಕುಮಾರ್ ಸುರಿಯುವ ಮಳೆಯಲ್ಲೇ ಜಡೆ, ಆನವಟ್ಟಿ ಆಸ್ಪತ್ರೆ ಸೇರಿ ಇತರೆಡೆ ಬೈಕ್‍ನಲ್ಲಿ ಹುಡುಕಿದ್ದಾರೆ. ಅಂತಿಮವಾಗಿ ಮಂಗಾಪುರ ರಸ್ತೆ ಮಧ್ಯೆ ಸಿಕ್ಕ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದು ಪರೀಕ್ಷೆ ಬರೆಯಲು ಕೂರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT