<p>ಸವಣೂರು: ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಪ್ರಶಾಂತ ಪ್ರಕಾಶ ಕಳಸೂರ (18) ಮೃತರು. ಯುವತಿಯನ್ನು ಕರೆದುಕೊಂಡು ಹೋದ ಆರೋಪ ಹೊರಿಸಿ, ಆತನ ಪಾಲಕರಿಂದ ಹಣ ವಸೂಲಿ ಮಾಡಿದ್ದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>ಪ್ರಕರಣ ಸಂಬಂಧ ಹಾವೇರಿಯ ಚಂದ್ರಶೇಖರ ಮುದಕಣ್ಣನವರ, ಮಾದೇವಪ್ಪ ಮೂಡಣ್ಣನವರ, ಕಲ್ಲಪ್ಪ ಮೂಡಣ್ಣನವರ, ಚೈತ್ರಾ ಮೂಡಣ್ಣನವರ ಎಂಬುವವರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಘಟನೆ ಹಿನ್ನೆಲೆ: ಪ್ರಶಾಂತನ ತಂದೆ ಪ್ರಕಾಶ ಕಳಸೂರ ಅವರಿಗೆ ಆರೋಪಿಗಳು ಕರೆ ಮಾಡಿ, ‘ನಿಮ್ಮ ಮಗ ಯುವತಿಯೊಬ್ಬಳ ಜೊತೆ ಹೋಗಿದ್ದು, ಅವರೀಗ ನಮ್ಮ ಬಳಿ ಇದ್ದಾರೆ’ ಎಂದು ಕರೆಸಿಕೊಂಡು, ‘₹5 ಲಕ್ಷ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಪ್ರಕಾಶ ಅವರು ₹3 ಲಕ್ಷ ನೀಡಲು ಒಪ್ಪಿಕೊಂಡಿದ್ದರು. ಕಳಸೂರು ಗ್ರಾಮದ ಅಜ್ಜನ ಮನೆಯಲ್ಲಿದ್ದ ಪ್ರಶಾಂತ ಈ ವಿಷಯ ತಿಳಿದು ಮಾರ್ಚ್ 12ರಂದು ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸವಣೂರು: ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಪ್ರಶಾಂತ ಪ್ರಕಾಶ ಕಳಸೂರ (18) ಮೃತರು. ಯುವತಿಯನ್ನು ಕರೆದುಕೊಂಡು ಹೋದ ಆರೋಪ ಹೊರಿಸಿ, ಆತನ ಪಾಲಕರಿಂದ ಹಣ ವಸೂಲಿ ಮಾಡಿದ್ದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>ಪ್ರಕರಣ ಸಂಬಂಧ ಹಾವೇರಿಯ ಚಂದ್ರಶೇಖರ ಮುದಕಣ್ಣನವರ, ಮಾದೇವಪ್ಪ ಮೂಡಣ್ಣನವರ, ಕಲ್ಲಪ್ಪ ಮೂಡಣ್ಣನವರ, ಚೈತ್ರಾ ಮೂಡಣ್ಣನವರ ಎಂಬುವವರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಘಟನೆ ಹಿನ್ನೆಲೆ: ಪ್ರಶಾಂತನ ತಂದೆ ಪ್ರಕಾಶ ಕಳಸೂರ ಅವರಿಗೆ ಆರೋಪಿಗಳು ಕರೆ ಮಾಡಿ, ‘ನಿಮ್ಮ ಮಗ ಯುವತಿಯೊಬ್ಬಳ ಜೊತೆ ಹೋಗಿದ್ದು, ಅವರೀಗ ನಮ್ಮ ಬಳಿ ಇದ್ದಾರೆ’ ಎಂದು ಕರೆಸಿಕೊಂಡು, ‘₹5 ಲಕ್ಷ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಪ್ರಕಾಶ ಅವರು ₹3 ಲಕ್ಷ ನೀಡಲು ಒಪ್ಪಿಕೊಂಡಿದ್ದರು. ಕಳಸೂರು ಗ್ರಾಮದ ಅಜ್ಜನ ಮನೆಯಲ್ಲಿದ್ದ ಪ್ರಶಾಂತ ಈ ವಿಷಯ ತಿಳಿದು ಮಾರ್ಚ್ 12ರಂದು ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>