ಘಟನೆ ಹಿನ್ನೆಲೆ: ಪ್ರಶಾಂತನ ತಂದೆ ಪ್ರಕಾಶ ಕಳಸೂರ ಅವರಿಗೆ ಆರೋಪಿಗಳು ಕರೆ ಮಾಡಿ, ‘ನಿಮ್ಮ ಮಗ ಯುವತಿಯೊಬ್ಬಳ ಜೊತೆ ಹೋಗಿದ್ದು, ಅವರೀಗ ನಮ್ಮ ಬಳಿ ಇದ್ದಾರೆ’ ಎಂದು ಕರೆಸಿಕೊಂಡು, ‘₹5 ಲಕ್ಷ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಪ್ರಕಾಶ ಅವರು ₹3 ಲಕ್ಷ ನೀಡಲು ಒಪ್ಪಿಕೊಂಡಿದ್ದರು. ಕಳಸೂರು ಗ್ರಾಮದ ಅಜ್ಜನ ಮನೆಯಲ್ಲಿದ್ದ ಪ್ರಶಾಂತ ಈ ವಿಷಯ ತಿಳಿದು ಮಾರ್ಚ್ 12ರಂದು ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.