ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುತ್ವ ತಿದ್ದುವುದು ರೈತ ಚಳವಳಿ ಉದ್ದೇಶ

ಸಂವಾದದಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್
Last Updated 8 ಡಿಸೆಂಬರ್ 2022, 4:27 IST
ಅಕ್ಷರ ಗಾತ್ರ

ಶಿವಮೊಗ್ಗ: ರೈತ ಚಳವಳಿಗಳ ಉದ್ದೇಶ ಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಹೇಳಿದರು.

ಇಲ್ಲಿನ ಕಮಲಾ ನೆಹರೂ ಕಾಲೇಜಿನಲ್ಲಿ ಬಹುಮುಖಿಯಿಂದ ನಡೆದ ‘ಜಾಗತೀಕರಣ ಹಾಗೂ ಕೃಷಿ ಬಿಕ್ಕಟ್ಟುಗಳು’ ಎಂಬ ವಿಷಯವಾಗಿ ಅವರು ಮಾತನಾಡಿದರು.

ದೇಶದಲ್ಲಿ ಇಂದು ಹೆಚ್ಚು ಆಹಾರ ಉತ್ಪಾದನೆ ಮಾಡಲಾಗುತ್ತದೆ. ಅದಕ್ಕೆ ಕಾರಣವೇನೆಂದರೆ ಹೈಬ್ರಿಡ್ ತಳಿಗಳು, ನೀರಾವರಿ ಯೋಜನೆ, ಬ್ಯಾಂಕ್‌ಗಳ ಸಾಲ. ಇದರಿಂದ ಬಹಳ ಅನುಕೂಲವಾಯಿತು. ಆದರೆ, ಸರ್ಕಾರದ ನೀತಿಯಿಂದಾಗಿ ರೈತರು ಪರಾವಲಂಬಿಗಳಾದರು. ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳತೊಡಗಿದರು. ಸರ್ಕಾರ ರೈತಪರ ನೀತಿ ಅನುಸರಿಸದೇ ಉದ್ದಿಮೆಗಳ ಪರವಾಗಿದೆ ಎಂದರು.

ಎಪಿಎಂಸಿ ವ್ಯವಸ್ಥೆ ರದ್ದುಮಾಡಿ ಖಾಸಗಿ ಮಾರುಕಟ್ಟೆ ಮುನ್ನೆಲೆಗೆ ತಂದಿರುವುದು ದೇಶದ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರೈತ ಭೂಮಿಯಿಂದ ದೂರ ಹೋದರೆ ಕ್ರಮೇಣ ಕೃಷಿ ಜ್ಞಾನ ಕಡಿಮೆಯಾಗುತ್ತದೆ. ಇದರಿಂದ ಕೃಷಿಯಲ್ಲಿ ಔಷಧ, ಕ್ರಿಮಿನಾಶಕ ಹೆಚ್ಚು ಉಪಯೋಗಿಸಿ ಆಹಾರ ವಿಷಪೂರಿತ ಆಗಿ ರಫ್ತು ನಿಲ್ಲುತ್ತದೆ. ಉತ್ಪಾದನೆ ಜಾಸ್ತಿ ಆಗಿ ಮಾರಾಟವಾಗದೆ ಆಹಾರ ಹಾಳಾಗುತ್ತದೆ. ಮನುಷ್ಯರ ವಂಶವಾಹಿನಿಗೂ ಆಹಾರಕ್ಕೂ ಸಂಬಂಧ ಇರುವುದರಿಂದ ಮುಂದೆ ಆರೋಗ್ಯ
ವಂತ ಮಕ್ಕಳು ಹುಟ್ಟುವುದು ಕಷ್ಟ ಎಂದರು.

ಇಂದು ಕೃಷಿ ಬಂಡವಾಳಶಾಹಿಗಳ ಪಾಲಾಗಿದೆ. ಸಾವಯವ ಪದ್ಧತಿ ಕೈಬಿಟ್ಟು ರೈತರು ಕ್ರಿಮಿನಾಶಕಗಳು, ಕೃತಕ ಗೊಬ್ಬರ ಉಪಯೋಗಿಸಿ ಭೂಮಿಯನ್ನು ಹಾಳು ಮಾಡಿದ್ದಾರೆ ಎಂದುಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಎಂ.ಡಿ.ಅಣ್ಣಯ್ಯನಾಯಕ್ ಹೇಳಿದರು.

ಡಾ.ಕೆ.ಜಿ.ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT